ಕಾಸರಗೋಡು, ಮೇ 17 (DaijiworldNews/HR): ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಶೀಘ್ರದಲ್ಲೇ ಆನ್ಲೈನ್ ಪೋರ್ಟಲ್ ಅನ್ನು ಸ್ಥಾಪಿಸಲಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಹೇಳಿದ್ದಾರೆ.
ಕೋವಿಡ್ನಿಂದ ಸಾವನ್ನಪ್ಪಿದವರ ಆಶ್ರಿತರಿಗೆ ಪರಿಹಾರ ನೀಡಲು ವಿನ್ಯಾಸಗೊಳಿಸಲಾದ ಪೋರ್ಟಲ್ನ ಮಾದರಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಪೋರ್ಟಲ್ ಅನ್ನುಆರಂಭಿಸಲಾಗುವುದು. ಪೋರ್ಟಲ್ ಕಾರ್ಯಾರಂಭ ಮಾಡಿದ ತಕ್ಷಣ ಎಂಡೋಸಲ್ಫಾನ್ ಪರಿಹಾರಕ್ಕೆ ಅರ್ಹರಾದವರು ಅರ್ಜಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬರಬೇಕಾಗಿಲ್ಲ. ಪೋರ್ಟಲ್ ಆರಂಭಿಸಿದ ಬಳಿಕ ಫಲಾನುಭವಿಗಳಿಗೆ ಮಾಹಿತಿ ನೆಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆನ್ಲೈನ್ ಪೋರ್ಟಲ್ ಕೆಲವೇ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ. ದ್ರ ಅಥವಾ ಗ್ರಾಮ ಕಚೇರಿ ಮೂಲಕ ಅರ್ಜಿ ಸಲ್ಲಿಸುವುದು. ಜಿಲ್ಲೆಯಲ್ಲಿ 733 ಮಂದಿ ಎಂಡೋಸಲ್ಫಾನ್ ಪರಿಹಾರಕ್ಕೆ ಅರ್ಹರಿರುವುದು ಈವರೆಗಿನ ಪರಿಶೀಲನೆಯಲ್ಲಿ ಪತ್ತೆಯಾಗಿದೆ. ಅನುದಾನಕ್ಕೆ ಅರ್ಹರನ್ನು ಹುಡುಕುವ ಪರೀಕ್ಷೆಯು ಮುಂದಿನ ಮೂರು ವಾರಗಳಲ್ಲಿ ಪೂರ್ಣಗೊಳ್ಳಲಿದೆ.
ಆನ್ಲೈನ್ ಪೋರ್ಟಲ್ ಕೆಲವೇ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ. ಫಲಾನುಭವಿಗಳು ನಿಮ್ಮ ಹತ್ತಿರದ ಅಕ್ಷಯ ಕೇಂದ್ರ ಅಥವಾ ಗ್ರಾಮ ಕಚೇರಿ ಮೂಲಕ ಅರ್ಜಿ ಸಲ್ಲಿಸುವುದು. ಜಿಲ್ಲೆಯಲ್ಲಿ 733 ಮಂದಿ ಎಂಡೋಸಲ್ಫಾನ್ ಪರಿಹಾರಕ್ಕೆ ಅರ್ಹರಾಗಿರುವುದಾಗಿ ಈವರೆಗಿನ ಪರಿಶೀಲನೆಯಲ್ಲಿ ಪತ್ತೆಯಾಗಿದೆ. ಅನುದಾನಕ್ಕೆ ಅರ್ಹರನ್ನು ಪತ್ತೆಹಚ್ಚುವ ಪರೀಕ್ಷೆಯು ಮುಂದಿನ ಮೂರು ವಾರಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.