ಉಡುಪಿ, ಮೇ 16 (DaijiworldNews/HR): ಶಿರ್ವ ಮೂಲದ ಸಹನಾ ದೇವಾಡಿಗ ಸಾವಿಗೆ ಆಳುವ ಸರಕಾರವೇ ನೇರ ಹೊಣೆಯಾಗಿದೆ. ಸಹನಾ ಉದ್ಯೋಗ ಸಿಗದೆ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇವಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕಾದುದು ಸರಕಾರದ ಕರ್ತವ್ಯ ಆ ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅವಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸರಕಾರವನ್ನು ಆಗ್ರಹಿಸಿದರು.
ಸೋಮವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ಮೋದಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ 2 ಕೋಟಿ ಉದ್ಯೋಗ ಇನ್ನು ನನ್ನ ಗುರಿ ಎಂದಿದ್ದರು, ಆದರೆ ಆ ಬರವಸೆ ಇಂದು ಹುಸಿಯಾಗಿದೆ. ದೇಶದಲ, ಕಳೆದ 5 ವರ್ಷಗಳಲ್ಲಿ, 40,000 ಯುವಕ ಯುವತಿಯರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಪ್ರಸಕ್ತ ಮೋದಿ ಆಡಳಿತದಲ್ಲಿ ಪ್ರತೀ 1 ಗಂಟೆಗೆ ಒಂದು ವಿದ್ಯಾವಂತ ಯುವಕ/ಯುವತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇವರಲ್ಲಿ ಸಹನಾ ಒಬ್ಬಳಾಗಿದ್ದಾಳೆ. ಇದು ಈ ಸರಕಾರದ ಆಡಳಿತ ವ್ಯವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ಮೂಡುಬೆಳ್ಳಿಯ ಶಿರ್ವದ ಬಡ ಕುಟುಂಬದ ಎಮ್ ಬಿಎ ಪಧವೀದರ ಸಹನಾ ಕುಂದರ್, ಉದ್ಯೋಗಕ್ಕಾಗಿ ಅಲೆದಲೆದು ಸೋತು ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ಆಕೆ ಡೆತ್ ನೋಟ್ನಲ್ಲಿ ಸರಕಾರವೇ ನೇರ ಹೊಣೆ , ನನ್ನ ಸಾವಿಗೆ ನಿರುದ್ಯೋಗವೇ ಮುಖ್ಯ ಕಾರಣವೆಂದು ಸ್ಪಷ್ಟವಾಗಿ ಹೇಳಿದ್ದಾಳೆ. ಸರಕಾರದ ಯುವ ಸಬಲೀಕರಣದ ಹುಸಿ ಭರವಸೆಗಳು ವಿದ್ಯಾವಂತ ಯುವ ಜನಾಂಗವನ್ನು ಆತ್ಮಹತ್ಯೆ ಗೈಯಲು ಪ್ರೇರೇಪಿಸುತ್ತಿವೆ ಎಂದರು.
ಇನ್ನು ದೇಶದಲ್ಲಿ 60 ಕೋಟಿ 25ವರ್ಷ ಕೆಳಗಿನ ಮತ್ತು 18 ವರ್ಷ ಮೇಲಿನ ಜನಾಂಗವಿದ್ದು, ಪ್ರಸಕ್ತ ಪರಿಸ್ಥಿತಿಯಲ್ಲಿ 20% ಪಡೆಯುತ್ತಿದ್ದಾರೆ. ಪದವೀದರರು ಮಾತ್ರ ಉದ್ಯೋಗ 80% ಮಂದಿ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮೋದಿ ಸರಕಾರದ ಅವೈಜ್ಞಾನಿಕ ಆರ್ಥಿಕ ಮತ್ತು ಆಡಳಿತ ನೀತಿ, ಕಾಂಗ್ರೆಸ್ ಸರಕಾರ ತನ್ನ 70 ವರ್ಷಗಳ ಆಡಳಿತಾವಧಿಯಲ್ಲಿ ಯುವ ಜನಾಂಗದ ಉದ್ಯೋಗ ಸೃಷ್ಟಿ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯ ಗುರಿಯೊಂದಿಗೆ ನಿರ್ಮಿಸಿದ ಉದ್ಯಮಗಳ ಮಾರಾಟದಿಂದುಂಟಾದ ಖಾಸಗೀಕರಣದ ಪರಿಣಾಮ ಉದ್ಯೋಗ ಸೃಷ್ಟಿ 28% ಇಳಿದಿದೆ. ಕಳೆದ 7 ವರ್ಷಗಳಿಂದ ದೇಶದಲ್ಲಿ, ಹೊಸ ಬೃಹತ್ ಉದ್ದಿಮೆಗಳ ಸೃಷ್ಟಿಯಾಗಿಲ್ಲ. ಇದಕ್ಕೆ ಈ ಸರಕಾರದ ಇಚ್ಛಾಶಕ್ತಿಯ ಕೊರತೆಯ ಕಾರಣ ಎಂದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಬಿಪಿನ್ ಚಂದ್ರ ಪಾಲ್, ವಕ್ತಾರರು, ಕುಶಾಲ್ ಶೆಟ್ಟಿ , ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.