ಮಂಗಳೂರು, ಮೇ 16 (DaijiworldNews/HR): ಆರ್ಯ ಮರಾಠ ಸಮಾಜದ ಉತ್ತರ ವಲಯದ ವತಿಯಿಂದ ನಡೆಸಲಾದ ಆರೋಗ್ಯ ತಪಾಸಣಾ ಶಿಬಿರವು ಎ.ಜೆ ಆಸ್ಪತ್ರೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಎಕ್ಕೂರು ಆರ್ಯ ಮರಾಠ ಭವನದಲ್ಲಿ ನಡೆಯಿತು.
ಸಮಾಜ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗಾಗಿ ನಡೆಸಲಾದ ಈ ಶಿಬಿರದಲ್ಲಿ ಕಣ್ಣು ತಪಾಸಣೆ ಹಾಗೂ ಚಿಕಿತ್ಸೆ ಅಲ್ಲದೆ ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ, ಚರ್ಮ, ಹೃದಯ, ಮಧುಮೇಹ, ರಕ್ತದೊತ್ತಡ, ಕಿವಿ ಮೂಗು ಗಂಟಲು ಹಾಗೂ ಹಲ್ಲಿನ ತಪಾಸಣೆ ಮತ್ತು ಚಿಕಿತ್ಸೆ ನಡೆಸಲಾಗಿ ಸುಮಾರು 100ಕ್ಕೂ ಅಧಿಕ ಫಲಾನುಭವಿಗಳು ಎ.ಜೆ.ಆಸ್ಪತ್ರೆಯ ತಜ್ಙ ವೈದ್ಯರುಗಳಿಂದ ಚಿಕಿತ್ಸೆ ಪಡೆದರು.
ಆರೋಗ್ಯ ಮಾಹಿತಿಗಾಗಿ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರುಗಳಾದ ಡಾ. ದೇವಿಕಾ, ಡಾ.ಪ್ರಮೋದ ಹಾಗೂ ಡಾ. ಕೃಷ್ಣಮೂರ್ತಿಯವರು ಮಾತನಾಡಿ ಆರೋಗ್ಯ ಮತ್ತು ನೆಮ್ಮದಿಯ ಬದುಕು ಇಂದಿನ ಅವಶ್ಯ ಎಂದರು.
ಈ ಸಂದರ್ಭ ಮರಾಠ ಸಮಾಜದ ಅಧ್ಯಕ್ಷ ಶ್ರೀಧರ್ ರಾವ್ ಬಹುಮಾನ್, ಕಾರ್ಯದರ್ಶಿ ಪ್ರದೀಪ್ ಚಂದ್ರ ಜಾದವ್, ಗಿರಿರಾಜ್ ಧರೇಕರ್ ಹಾಗೂ ಕ್ಯಾಂಪ್ ಮುಖ್ಯಸ್ಥರು, ಉತ್ತರ ವಲಯದ ಉಪ ಸಂಚಾಲಕ ಗಣೇಶ್ ರಾವ್, ಅಶೋಕ್ ಜಾದವ್, ಮಾಧವ್ ಜಿ, ಸಂಚಾಲಕಿ ಆಶಾ ಸಪ್ಟೇಕರ್, ಸವಿತಾ ವಿಶ್ವನಾಥ, ಶುಭಾಜಗದೀಶ್, ಕವಿತಾ, ಪುನೀತಾ, ಬಿಂದು, ಪ್ರೇಮಾ, ಆಶಾ ನಾಗರಾಜ್ ಜಯಲಕ್ಷ್ಮಿ, ತೇಜಸ್ವಿನಿ ಉಪಸ್ಥಿತರಿದ್ದರು.
ಉತ್ತರ ವಲಯ ಸಂಚಾಲಕ ಕೆ.ಸಿ. ಹರಿಶ್ಚಂದ್ರ ರಾವ್ ಮುಂದಾಳತ್ವದಲ್ಲಿ ನಡೆಸಲಾದ ಈ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ವಿಶ್ವನಾಥ ರಾವ್ ಸ್ವಾಗತಿಸಿ, ಜಯ ದೇವದಾಸ್ ಧನ್ಯವಾದ ವಿತ್ತರು. ಆನಂದ ರಾವ್ ಸಹಕರಿಸಿದರು ಹಾಗೂ ವಲಯದ ನಾಗರಾಜ್ ಸಿಂಧ್ಯರವರು ಕಾರ್ಯಕ್ರಮ ನಿರೂಪಿಸಿದರು.