ಮಂಗಳೂರು, ಮೇ 15 (DaijiworldNews/HR): ಮಂಗಳೂರು ಮೂಲದ ಮನೋರೋಗ ಶಾಸ್ತ್ರಜ್ಞ ಡಾ. ರವೀಶ್ ತುಂಗ ಅವರು ಭಾರತದಲ್ಲಿ ಸಮುದಾಯ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿನ ತಮ್ಮ ಮಹತ್ತರ ಕೊಡುಗೆಗಾಗಿ ಜಿಂಬಾಬ್ವೆ ಸರ್ಕಾರದಿಂದ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದರು.
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿಂಬಾಬ್ವೆ ರಾಯಭಾರಿ ಡಾ. ಗಾಡ್ಫ್ರೇ ಚಿಪಾರೆ ಅವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಂಬಾಬ್ವೆ ಪ್ರಥಮ ಮಹಿಳೆ ಡಾ. ಆಕ್ಸಿಲಿಯಾ ನಂಗಾಗ್ವ ಹಾಗೂ ಅಲ್ಲಿನ ಸರ್ಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.