ಬಂಟ್ವಾಳ, ಮೇ 13 (DaijiworldNews/SM): ಪ್ರಧಾನಿ ಮೋದಿಯವರ ನಾಯಕತ್ವದ ಕಾರಣಕ್ಕೆ ಭಾರತ ಇಂದು ಬಲಿಷ್ಠವಾಗಿ ನಿಂತಿದ್ದು, ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿ ಸೂಚನೆ ಪಾಲಿಸಿಕೊಂಡು ಕೆಲಸ ಮಾಡಿದಾಗ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಅವರು ಬಿ.ಸಿ.ರೋಡಿನ ಶಿವಳ್ಳಿ ಸಭಾಭವನದಲ್ಲಿ ಬಂಟ್ವಾಳ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಸಭೆಯನ್ನು ಉದ್ಘಾಟಿಸಿದರು. ಒಬಿಸಿ ಸಮುದಾಯದ ಬಹುತೇಕ ಮಂದಿ ಬಿಜೆಪಿಯ ಮತದಾರರಾಗಿದ್ದು, ಹೀಗಾಗಿ ಮೋರ್ಚಾ ಪಕ್ಷಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಯುಪಿಯಲ್ಲಿಯೂ ಒಬಿಸಿ ಮತದಾರರು ಬಿಜೆಪಿ ಪರ ನಿಂತ ಕಾರಣಕ್ಕೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.ಮೋರ್ಚಾಗಳು ಯಶಸ್ವಿಯಾಗಿ ಕೆಲಸ ಮಾಡಿದಾಗ ಪಕ್ಷ ಬಲಿಷ್ಠಗೊಳ್ಳಲು ಸಾಧ್ಯವಾಗಿದೆ.
ಕಾರ್ಯಕರ್ತರಿಗೆ ಬೆಂಬಲವಾಗಿ ನಿಲ್ಲುವ ಕುಟುಂಬಕ್ಕಾಗಿ ಬಂಟ್ವಾಳದಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿದೆ ಎಂದುಅವರು ಹೇಳಿದರು.