ಉಡುಪಿ, ಮಾ 18 (DaijiworldNews/HR): ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೈಜಿವರ್ಲ್ಡ್ ಉಡುಪಿ ಸ್ಟುಡಿಯೋದಿಂದ ಆಯೋಜಿಸಿದ್ದ, 'ಗೋದಲಿ ಸಡಗರ' ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಮಾರ್ಚ್ 15 ಮಂಗಳವಾರದಂದು ಉಡುಪಿಯ ತನಿಷ್ಕ್ ಜ್ಯುವೆಲ್ಲರಿ ಶೋರೂಮ್ ನಲ್ಲಿ ನಡೆಯಿತು.
ದೈಜಿವರ್ಲ್ಡ್ ಉಡುಪಿ, ಕಿಶೂ ಎಂಟರ್ಪ್ರೈಸಸ್ ಮತ್ತು ಉಜ್ವಾಡ್ ಪಾಕ್ಷಿಕ್ ಜಂಟಿಯಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ವೈಯಕ್ತಿಕ ಮತ್ತು ತಂಡ ಎಂದು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು.
ಕಾಲಿನ್ ಓಲ್ಸನ್ ಸಲ್ಡಾನ್ಹಾ, ಮಂಗಳೂರು ವೈಯಕ್ತಿಕ ವಿಭಾಗದಲ್ಲಿ ವಿಜೇತರಾಗಿ ಹೊರ ಹೊಮ್ಮಿದರು. ಅನಿಲ್ ಆಲ್ವಿನ್ ವೇಗಸ್, ಮಂಗಳೂರು ಮತ್ತು ಕ್ಲಿಫ್ಟನ್ ಮೆಲ್ರಿಕ್ ಡಿಸೋಜಾ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದರು.
ವಿಜೇತರಿಗೆ ಕ್ರಮವಾಗಿ ಟ್ರೋಫಿ ಮತ್ತು ಪ್ರಮಾಣ ಪತ್ರದೊಂದಿಗೆ 5,000 ರೂ, 4,000 ರೂ, 3,000 ರೂ ಬಹುಮಾನ ನೀಡಲಾಯಿತು.
ಇನ್ನು ಗುಂಪು ವಿಭಾಗದಲ್ಲಿ ಐಸಿವೈಎಂ ಸೈಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಚರ್ಚ್, ಮಂಗಳೂರು ತಂಡ ವಿಜೇತರಾಗಿ ಹೊರಹೊಮ್ಮಿದರು.
ಅವರ್ ಲೇಡಿ ಆಫ್ ರೋಸರಿ ಕೆಥೆಡ್ರಲ್, ಮಂಗಳೂರು ಮತ್ತು ಹೋಲಿ ಕ್ರಾಸ್ ಚರ್ಚ್ ಎರ್ಲಪದವು ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದರು.
ವಿಜೇತರಿಗೆ ಕ್ರಮವಾಗಿ ಟ್ರೋಫಿ ಮತ್ತು ಪ್ರಮಾಣ ಪತ್ರದೊಂದಿಗೆ 7,000 ರೂ, 6,000 ರೂ, 5,000 ರೂ. ನೀಡಲಾಯಿತು.
ತನಿಷ್ಕ್ ಜ್ಯುವೆಲ್ಲರಿ ಉಡುಪಿ, ಫ್ರಾಂಚೈಸಿ ಮಾಲಕರಾದ ಮ್ಯಾಕ್ಸಿಂ ಸಲ್ಡಾನ್ಹಾ, ಗ್ರೆಟ್ಟಾ ಸಲ್ಡಾನ್ಹಾ ಮತ್ತು ಮಣಿಪಾಲದ ಕ್ರೈಸ್ಟ್ ಸ್ಕೂಲ್ನ ಪ್ರಾಂಶುಪಾಲರಾದ ಎಲಿಜಾ ವಾಸ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ವಿಜೇತರಿಗೆ ಅತಿಥಿಗಳು ಬಹುಮಾನ ನೀಡಿ ಶುಭಹಾರೈಸಿದರು.
ದೈಜಿವರ್ಲ್ಡ್ ಉಡುಪಿ ಆಯೋಜಿಸಿದ ಗೋದಲಿ ಸಡಗರ ಸ್ಪರ್ಧೆಯು ಸುಂದರವಾದ ಗೋದಲಿಯನ್ನು ನಿರ್ಮಿಸಲು ಸ್ಫೂರ್ತಿ ನೀಡಿತು ಅಲ್ಲದೆ ನಮ್ಮ ಧರ್ಮಪ್ರಾಂತ್ಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸುಂದರವಾದ ಗೋದಲಿಯನ್ನು ನಿರ್ಮಿಸಲು 15 ದಿವಸದ ಸಿದ್ಧತೆ ಮಾಡಿಕೊಂಡಿದ್ದೆವು. ಈ ಸ್ಪರ್ಧೆಯಲ್ಲಿ ವಿಜೇತರಾಗಿದ್ದು ಸಂತೋಷವಾಗಿದೆ. ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದೈಜಿವರ್ಲ್ಡ್ ವೇದಿಕೆ ಕೊಟ್ಟಿದೆ. ಅದಕ್ಕಾಗಿ ಕೃತಜ್ಞತೆಯನ್ನು ಅರ್ಪಿಸುತ್ತೇವೆ ಎಂದು ಗೋದಲಿ ಸಡಗರ ಸ್ಪರ್ಧೆಯ ವಿಜೇತರಾದ ರೋಸರಿ ಚರ್ಚ್ನ ಫಿಲಿಪ್ ಪಿರೇರಾ ಮತ್ತು ಹೆರ್ಲಿನ್ ಮಿಯಾಪದವು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಗೋದಲಿ ಸಡಗರ ಸ್ಪರ್ಧೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಕಾರ್ಯಕ್ರಮವನ್ನು 5ನೇ ಬಾರಿಗೆ ಆಯೋಜಿಸಲಾಗಿದೆ. ಈ ಸ್ಪರ್ಧೆಯು ತನಿಷ್ಕ್ ಉಡುಪಿ, ವರ್ಲ್ಡ್ ಆಫ್ ಟೈಟಾನ್ ಉಡುಪಿ ಮತ್ತು ಟೈಟಾನ್ ಐ ಪ್ಲಸ್ ಮತ್ತು ಕಾಟನ್ ಕಿಂಗ್ ಸಹಭಾಗಿತ್ವದಲ್ಲಿ ನಡೆಯಿತು.
ದಾಯ್ಜಿವರ್ಲ್ಡ್ ಉಡುಪಿಯ ಅಡ್ಮಿನ್ ಮತ್ತು ಕಾರ್ಯಕ್ರಮದ ಸಹ ಸಂಯೋಜಕರು ರೂಪಾ ಶ್ಯಾಲೆಟ್ ಮಸ್ಕರೇನ್ಹಸ್ ವಂದಿಸಿದರು. ಅಕೌಂಟೆಂಟ್ ರಿಯಾ ಲೂಯಿಸ್ ಸ್ವಾಗತಿಸಿ ಬಹುಮಾನ ವಿತರಣಾ ಕಾರ್ಯಕ್ರಮ ವನ್ನು ನಿರ್ವಹಿಸಿದರು.
ಫಲಿತಾಂಶ:
ತಂಡ ವಿಭಾಗದ ವಿಜೇತರು
ಪ್ರಥಮ - ಐಸಿವೈಎಂ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಚರ್ಚ್, ಮಂಗಳೂರು
ದ್ವಿತೀಯ - ಅವರ್ ಲೇಡಿ ಆಫ್ ರೋಸರಿ ಕೆಥೆಡ್ರಲ್, ಮಂಗಳೂರು
ತೃತೀಯ - ಹೋಲಿ ಕ್ರಾಸ್ ಚರ್ಚ್ ಎರ್ಲಪದವು
ಸಮಾಧಾನಕರ ಬಹುಮಾನ - ಫಾತಿಮಾ ಯುತ್ ಕಮಿಟಿ (ಎಫ್ ವೈಸಿ), ಅವರ್ ಲೇಡಿ ಆಫ್ ಫಾತಿಮಾ ಚರ್ಚ್ ಮಿಯಾಪದವು, ಸೇಕ್ರೆಡ್ ಹಾರ್ಟ್ ವಾರ್ಡ್, ಮಿಯಾರ್ ಚರ್ಚ್ (ವೈಸಿಎಸ್) ಮೊಗರ್ನಾಡ್
ವೈಯಕ್ತಿಕ ವಿಭಾಗದ ವಿಜೇತರು
ಪ್ರಥಮ - ಕಾಲಿನ್ ಓಲ್ಸನ್ ಸಲ್ಡಾನ್ಹಾ, ಮಂಗಳೂರು
ದ್ವಿತೀಯ - ಅನಿಲ್ ಆಲ್ವಿನ್ ವೇಗಸ್, ಮಂಗಳೂರು
ತೃತೀಯ - ಕ್ಲಿಫ್ಟನ್ ಮೆಲ್ರಿಕ್ ಡಿಸೋಜಾ ದ್ವಿತೀಯ
ಸಮಾಧಾನಕರ ಬಹುಮಾನ - ವಿಲ್ಸನ್ ಜೋಯಲ್ ಪಾಯಸ್ ಬಂಟ್ವಾಳ, ಓನಿಲ್ ಸುನಿಲ್ ಡಿಸೋಜ, ಮಂಗಳೂರು ಮತ್ತು ಸಚಿನ್ ಸಾಲ್ದಾನ್ಹ