ಉಡುಪಿ, ಮಾ.17 (DaijiworldNews/SM): ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ 19 ಶೆಡ್ ಗಳನ್ನು ನೆಲಸಮ ಮಾಡಿದ ಘಟನೆ ನಡೆದಿದ್ದು, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದಾರೆ.
ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುದಿ, ಕೆಂಜೂರು ಮತ್ತು ಹೊಸೂರು ಗ್ರಾಮಗಳಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ 19 ಶೆಡ್ ಗಳನ್ನು ತಹಶೀಲ್ದಾರ್ ರಾಜಶೇಖರ್ ಮೂರ್ತಿ ಸ್ವತಃ ತಮ್ಮ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳೊಂದಿಗೆ ತೆರಳಿ ಸಂಪೂರ್ಣ ನೆಲಸಮ ಮಾಡಿದ್ದಾರೆ. ಈ ಭಾಗದಲ್ಲಿ ಸರಕಾರಿ ಜಾಗದಲ್ಲಿ ಸುಮಾರು 19 ಶೆಡ್ ಗಳನ್ನು ನಿರ್ಮಾಣ ಮಾಡಲಾಗಿತ್ತು. ಇದನ್ನು ಗಮನಿಸಿದ್ದ ಬ್ರಹ್ಮಾವರ ತಹಶೀಲ್ದಾರರು ಶೆಡ್ ಗಳನ್ನು ನೆಲಸಮ ಮಾಡಿ ಎಕರೆ ಗಟ್ಟಲೆ ಭೂಮಿಯನ್ನು ಇಲಾಖೆಯ ವಶಕ್ಕೆ ಪಡೆದು ಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕರಾದ ಲಕ್ಷ್ಮಿ ನಾರಾಯಣ ಭಟ್, ಕುದಿ, ಕೆಂಜೂರು, ಹೊಸೂರು ಗ್ರಾಮದ ಗ್ರಾಮ
ಕರಣಿಕರು, ಮತ್ತು ಗ್ರಾಮ ಸಹಾಯಕರು, ಹಾಗೂ ಚಾಲಕರು, ಸಿಬ್ಬಂದಿಗಳು ಭಾಗಿಯಾಗಿದ್ದರು.