ಕಾಪು,ಮಾ.17 (DaijiworldNews/SM): ಉಚ್ಚಿಲ ಸಮುದ್ರದಲ್ಲಿಯ ಬಂಡೆ ಕಲ್ಲಿನಲ್ಲಿ ಪಚ್ಚೆಲೆ ತೆಗೆಯುತ್ತಿದ್ದ 7 ಮಂದಿಯನ್ನು ಬಂಧಿಸಲಾಗಿದೆ.
ಸ್ಥಳೀಯ ಮೀನುಗಾರರು ಅವರನ್ನು ಸೆರೆ ಹಿಡಿದು ಉಚ್ಚಿಲ ಸುಭಾಸ್ ರಸ್ತೆ ಬಳಿಯ ಸಮುದ್ರ ಕಿನಾರೆಗೆ ತಂದು ಪಡುಬಿದ್ರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಏಳು ಮಂದಿ ದಕ್ಷಿಣ ಭಾರತದ ಕೂಲಿ ಕೆಲಸಗಾರರಾಗಿದ್ದು, ಮಾಲಕರು ಬೇರೆಯೇ ಆಗಿದ್ದಾರೆ. ಅವರು ಉಪಯೋಗಿಸುತ್ತಿದ್ದ ದೋಣಿಗಳನ್ನು ದಂಡೆಗೆ ತಂದು ನಿಲ್ಲಿಸಲಾಗಿದೆ.