ಉಡುಪಿ, ಮಾ 17 (DaijiworldNews/HR): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ತೀರ್ಪು ಅತೃಪ್ತಿಕರವಾಗಿದ್ದು, ಇದು ಮುಸ್ಲಿಮರ ಸಾಂವಿಧಾನಿಕ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ಪರಿಗಣಿಸದೆ ಸರ್ಕಾರದ ಆಶಯದ ನಿರ್ಧಾರವನ್ನು ಎತ್ತಿಹಿಡಿಯುವಂತಿದೆ ಎಂದು ಮುಸ್ಲಿಂ ಒಕ್ಕೂಟಗಳು ಗುರುವಾರದಂದು ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ನಗರದಲ್ಲಿ ಮುಸ್ಲಿಂ ಮಾಲೀಕತ್ವದ ಕೆಲವೊಂದು ಅಂಗಡಿ, ಮಳಿಗೆಗಳು ತೆರೆಯದೆ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ.
ಜಿಲ್ಲೆಯಲ್ಲಿ ಭಾಗಶಃ ಬಂದ್ಗೆ ಬೆಂಬಲ ನೀಡಿದ್ದು, ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಕೆಲವೊಂದು ಮುಸ್ಲಿಂ ವ್ಯಾಪಾರಸ್ಥರು ಬಂದ್ಗೆ ಬೆಂಬಲಿದ್ದು, ಮುಸ್ಲಿಂ ಮಾಲೀಕತ್ವದ ಕೆಲವೊಂದು ಅಂಗಡಿಗಳು ಓಪನ್ ಇದೆ.
ಇನ್ನು ಬಂದ್ ಮಾಡಬೇಕೋ ಇಲ್ಲವೋ ಎಂದು ಕೆಲವೊಂದು ಅಂಗಡಿಗಳ ಮಾಲಿಕರು ಗೊಂದಲದಲ್ಲಿದ್ದು, ಸದ್ಯ ಮುಸ್ಲಿಂರ ಮಾಲೀಕತ್ವದ ಅಂಗಡಿ ಮಳಿಗೆಗಳ ಬಳಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.