ಬಂಟ್ವಾಳ, ಮಾ. 13 (DaijiworldNews/SM): ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ನಾವು ಎದುರಿಸಲು ಸಿದ್ದರಿದ್ದು, ಮೋದಿಯವರ ಹಾಗೂ ಬೊಮ್ಮಾಯಿಯವರ ಜನಪರ ಯೋಜನೆಯನ್ನು ಜನರ ಮುಂದಿಟ್ಟುಕೊಂಡು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ವಸತಿ ಸಚಿವ ಸೊಮಣ್ಣ ಅವರು ಹೇಳಿದರು.
ಅವರು ಬಡಾಜೆ ರವಿಶಂಕರ್ ಶೆಟ್ಟಿ ಅವರ ಮನೆಯಲ್ಲಿ ಅವರ ತಂದೆಗೆ 100 ವರ್ಷ ತುಂಬಿದ ಸಂತೋಷ ಕೂಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಾಸು ಹೋಗುವ ವೇಳೆ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಪಂಚರಾಜ್ಯಗಳಲ್ಲಿ ಜನ ಯಾವ ತೀರ್ಮಾನ ಮಾಡಿ ಮತ ನೀಡಿ ಬಿಜೆಪಿಯನ್ನು ಗೆಲ್ಲಿಸಿದ್ದಾರಾ ಅದೇ ಮಾದರಿಯಲ್ಲಿ ದೇಶಕ್ಕೋಸ್ಕರ ನರೇಂದ್ರ ಮೋದಿಯವರ ಚಿಂತನೆಯನ್ನು ಪರಿಚಯಿಸುವುದೇ ನಮ್ಮ ಕೆಲಸ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹಿಂದಿನ ಸರಕಾರ ಮಾಡಿದ ಗೊಂದಲದ ಗೂಡಿನಿಂದ 18 ಲಕ್ಷ ಮನೆಗಳು 6 ಲಕ್ಷದ 60 ಸಾವಿರ ಸೈಟುಗಳು ಕೇಂದ್ರ ಸರಕಾರಕ್ಕೆ ಮಾಹಿತಿ ಕೊಡದೆ ತಿರಸ್ಕರಿಸಿದ್ದಾರೆ. ಆ ಬಳಿಕ ಪ್ರಧಾನ ಮಂತ್ರಿಗಳ ಸೂಚನೆಯಂತೆ ಮುಖ್ಯಮಂತ್ರಿ ಗಳು 5 ಲಕ್ಷ ಮನೆಗಳು 6612 ಕೋಟಿ ರೂಪಾಯಿ ವೆಚ್ಚದಲ್ಲಿ 4 ಲಕ್ಷ ಮನೆ ಗ್ರಾಮೀಣ ಭಾಗಕ್ಕೆ ಹಾಗೂ 1 ಲಕ್ಷ ನಗರ ಪ್ರದೇಶಕ್ಕೆ ಮನೆ ನೀಡುತ್ತಿದ್ದೇವೆ ಎಂದರು.