ಉಡುಪಿ, ಮಾ 13 (DaijiworldNews/HR): ತಲ್ಲೂರು ಫ್ಯಾಮಿಲಿ ಟ್ರಸ್ಟ್, ನವೋದಯ ಸ್ವ ಸಹಾಯ ಸಂಘ ಮತ್ತು ಗಿರಿಜಾ ಗ್ರೂಪ್ ಅಫ್ ಕನ್ಸರ್ನ್ಸ್ ಇವರ ಜಂಟಿ ಆಶ್ರಯದಲ್ಲಿ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವು ನಡೆಯಿತು.
ಕಾರ್ಯಕ್ರಮವನ್ನು ಯಕ್ಷಗಾನ ಕೆಂದ್ರ ಉಡುಪಿ ಇದರ ಆಡಳಿತಾಧಿಕಾರಿ ಡಾಕ್ಟರ್ ಜಯಪ್ರಕಾಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿದ ಅವರು, ಇದೊಮದು ಸಮಾಜಮುಖಿ ಕಾರ್ಯಕ್ರಮ. ಸಮಾಜದಲ್ಲಿನ ಎಲ್ಲರಿಗೂ ಉತ್ತಮ ಆರೋಗ್ಯ ಲಭಿಸುವಂಗಾತಗಲು ನಾವು ಶ್ರಮಿಸಬೇಕು. ಪರೋಪಕಾರ ಎನ್ನುವುದು ಜೀವನಕ್ಕೆ ನಿಜವಾದ ಅರ್ಥವನ್ನು ನೀಡುತ್ತದೆ. ಮನುಷ್ಯನಾದವನು ತನ್ನ ಸ್ವಂತಕ್ಕೆ ಶ್ರಮಿಸುವಂತೆ ಸಮಾಜಕ್ಕಾಗಿಯೂ ಶ್ರಮಿಸಿದಾಗ ಮನುಷ್ಯನ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ. ನಮ್ಮ ಪ್ರಕೃತಿಯಿಂದ ಅನೇಕ ಪಾಠಗಳನ್ನು ನಾವು ಕಲಿಯಬೇಕು. ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ನಮ್ಮ ಜೀವನವನ್ನು ಕಟ್ಟಿಕೊಳ್ಳೊಣ, ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ನ ರವೀಂದ್ರ ಶೆಟ್ಟಿಯವರು ಇಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದ್ದಾರೆ ಎಂದರು.
ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ್ಯರಾದ ಡಾಕ್ಟರ್ ತಲ್ಲೂರು ಶಿವರಾಮ ಶೆಟ್ಟಿ, ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಆರೋಗ್ಯ ಸಮಸ್ಯೆಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಇಂತಹ ರೋಗ್ಯ ತಪಾಸಣಾ ಶಿಬಿರಗಳು ಸಹಕಾರಿ ಎಂದರು.
ಈ ಸಂಧರ್ಭದಲ್ಲಿ ವೈದ್ಯರಿಂದ ಉಚಿತವಾಗಿ ಮಾಹಿತಿ ಮತ್ತು ಸಂದರ್ಶನ, ಉಚಿತ ರಕ್ತ ಮತ್ತು ಮೂತ್ರ ಪರೀಕ್ಷೆ, ಅಗತ್ಯ ಇರುವವರಿಗೆ ಉಚಿತ ಔಷಧಿ, ಮತ್ತು ಉಚಿತ ಮಧುಮೇಹ ಮತ್ತು ಬಿ.ಪಿ. ತಪಾಸಣೆಯು ನಡೆಯಿತು. ಸೃಷ್ಟಿ ಕ್ಲಿನಿಕ್ ನ ಪ್ರಸೂತಿ ಮತ್ತು ಸ್ರ್ರೀ ರೋಗ ತಜ್ಞರಾದ ಡಾಕ್ಟರ್ ರಂಜಿತಾ ಎಸ್. ನಾಯಕ್ ಮಹಿಳೆಯರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತಾಗಿ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ನ ಪ್ರವರ್ತಕರಾದ ರವೀಂದ್ರ ಶೆಟ್ಟಿ ಮತ್ತು ಹರೀಶ್ ಕುಮಾರ್, ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷರಾದ ಡಾಕ್ಟರ್ ತಲ್ಲೂರು ಶಿವರಾಮ ಶೆಟ್ಟಿ, ಜನಮಿತ್ರ ಡಿಜಿಟಲ್ ಸೇವಾಕೇಂದ್ರದ ಮುಖ್ಯಸ್ಥರಾದ ಧನಂಜಯ್ ಪೂಜಾರಿ ಕಿದಿಯೂರು, ನವೋದಯ ಸ್ವಸಹಾಯ ಸಂಘಗಳ ವಿಮಲಾ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.