ಉಡುಪಿ, ಮಾ 13 (DaijiworldNews/HR): ರಸ್ತೆ ಗುಂಡಿಗಳಿಂದಾಗಿ ಉಡುಪಿ ರೈಲು ನಿಲ್ದಾಣದಿಂದ ವಿವಿಧೆಡೆಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.
ಉಡುಪಿ ರೈಲು ನಿಲ್ದಾಣಕ್ಕೆ ಹೋಗುವ 1.5 ಕಿಮೀ ರಸ್ತೆಯಿದ್ದು, ಅದರಲ್ಲಿ ರಸ್ತೆಯ ಮೊದಲ ಭಾಗವು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಅಡಿಯಲ್ಲಿದೆ ಮತ್ತು ಇನ್ನೊಂದು ಭಾಗವು ರೈಲ್ವೆಗೆ ಸೇರಿದ್ದು, ರೈಲ್ವೇ ಇಲಾಖೆ ನಿರ್ವಹಿಸುತ್ತಿರುವ 1.3 ಕಿ.ಮೀ ರಸ್ತೆಯು ಇತ್ತೀಚಿನ ದಿನಗಳಲ್ಲಿ ಯಾವುದೇ ದುರಸ್ತಿ ಕಾರ್ಯಗಳು ಕಂಡಿಲ್ಲ.
ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಗುಂಡಿಗಳಿರುವ ರಸ್ತೆಯಿಂದಾಗಿ ಉಡುಪಿ ರೈಲು ನಿಲ್ದಾಣಕ್ಕೆ ಕಪ್ಪು ಚುಕ್ಕೆಯಾಗಿದೆ. ಮುಂಬೈ, ಮಡಗಾಂವ್, ತಿರುವನಂತಪುರಂ ಮತ್ತು ಉತ್ತರ ಮತ್ತು ದಕ್ಷಿಣ ಭಾರತದ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳು ಉಡುಪಿ ನಿಲ್ದಾಣಕ್ಕೆ ಆಗಮಿಸುತ್ತವೆ.
ಪ್ರಯಾಣಿಕರನ್ನು ಕರೆದೊಯ್ಯುವ ಕ್ಯಾಬ್ಗಳು, ಆಟೋ ರಿಕ್ಷಾಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತದೆ.
ಇನ್ನು ರೈಲ್ವೇ ಇಲಾಖೆಯ ಮೂಲಗಳ ಪ್ರಕಾರ, ರಸ್ತೆಯನ್ನು ಪರಿಶೀಲಿಸಿದ ಹಿರಿಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಹಣ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ಇಲಾಖೆ ಇದೆ.