ಹೆಜಮಾಡಿ, ಮಾ 12 (DaijiworldNews/MS): ಸುರತ್ಕಲ್ (ಎನ್ಐಟಿಕೆ) ಟೋಲ್ ಗೇಟ್ ತೆರವು ಗೊಳಿಸುವಂತೆ ಒತ್ತಾಯಿಸಿ ಮಾರ್ಚ್ 15 ರಂದು ಹೆಜಮಾಡಿ ಟೋಲ್ ಕೇಂದ್ರದಿಂದ ಸುರತ್ಕಲ್ ಟೋಲ್ ಗೇಟ್ ವರಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿವೆ, ಎಂದು ಸಾಮಾಜಿಕ ಹೋರಾಟಗಾರ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಅಮೃತ್ ಶೈಣೈ , ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಅವರು ಶನಿವಾರ ನಡೆದ ಪತ್ರಿಕಾ ಭವನದಲ್ಲಿ , "ಹೆಜಮಾಡಿ ಟೋಲ್ ವ್ಯಾಜ್ಯ ಆರಂಭಗೊಂಡ ತಕ್ಷಣ ತೆರವುಗೊಳಿಸುವ ತಾತ್ಕಾಲಿಕ ನೆಲೆಯಲ್ಲಿ ಆರಂಭಿಸಿರುವ ಸುರತ್ಕಲ್ (ಎನ್ಐಟಿಕೆ) ಟೋಲ್ ಗೇಟ್ ಹಲವು ಭರವಸೆಯ ಹೊರತಾಗಿಯೂ ಕಳೆದ ಆರು ವರ್ಷ ಗಳಿಂದ ಟೋಲ್ ಸಂಗ್ರಹವನ್ನು ನಡೆಸುತ್ತಾ ಬಂದಿದೆ ಒಂಭತ್ತು ಕಿ.ಮೀ. ಅಂತರದಲ್ಲಿ ಎರಡೆರಡು ಟೋಲ್ ಕೇಂದ್ರಗಳಲ್ಲಿ ಸುಂಕ ಪಾವತಿಸುವುದು ಪ್ರಯಾಣಿಕರಿಗೆ ಹೊರೆಯಾಗಿದೆ.
ಆರು ವರ್ಷಗಳ ಹಿಂದೆ ಆರು ತಿಂಗಳ ತಾತ್ಕಾಲಿಕ ಅವರಿಗೆ ಎಂದು ಜನತೆಗೆ ಭರದಲ್ಲಿ ನೀಡಿ ಸುರತ್ಕಲ್ ನಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿತ್ತು. ಹೆಜಮಾಡಿ ಟೋಲ್ ಕೇಂದ್ರ ಆರಂಭಗೊಂಡ ನಂತರವೂ ಸುರತ್ಕಲ್ ಟೋಲ್ ಕೇಂದ್ರ ಮುಚ್ಚದಿರುವುದನ್ನು ವಿರೋಧಿಸಿ ಕಳೆದ ಐದು ವರ್ಷಗಳಲ್ಲಿ ಹಲವು ಹಂತದ ಹೋರಾಟಗಳನ್ನು ನಡೆಸಲಾಗಿದೆ.
2018 ರಲ್ಲಿ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರ ಜಂಟಿ ಸಭೆ ನಡೆಸಿ ಸುರತ್ಕಲ್ ಟೋಲ್ ಕೇಂದ್ರ ಹಾಗೂ ಹೆಜಮಾಡಿ ಟೋಲ್ ಕೇಂದ್ರಗಳನ್ನು ವಿಲೀನಗೊಳಿಸಿ ಒಂದು ಟೋಲ್ ಗೇಟ್ ಮಾತ್ರ ಉಳಿಸಿಕೊಳ್ಳುವ ನಿರ್ಣಯ ತೆಗೆದು ಕೊಂಡಿದ್ದರೂ ಕುಂಟು ನೆಪಗಳನ್ನು ಮುಂದಿಟ್ಟು ನಿರ್ಣಯವನ್ನು ಜಾರಿಗೊಳಿಸದೆ ಹಾಗೆ ಉಳಿದುಕೊಂಡಿದೆ .
ಈ ನಡುವೆ ಬಿ ಸಿ ರೋಡ್, ಸುರತ್ಕಲ್ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯನ್ನಾಗಿಸುವ ಹಲವು ಭರವಸೆ ನೀಡಲಾಗಿದೆ. ಕಳೆದ ತಿಂಗಳು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಸಚಿವರು ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಆದರೆ ದಿನವೊಂದಕ್ಕೆ 15.06 ಸುಂಕವನ್ನು ಪ್ರಯಾಣಿಕರಿಂದ ಸಂಗ್ರಹಿಸುತ್ತಿದೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅರವತ್ತಕ್ಕೂ ಹೆಚ್ಚು ಸಾಮಾಜಿಕ ಸಂಘ ಸಂಸ್ಥೆಗಳು, ಸಾರಿಗೆ ಕ್ಷೇತ್ರದ ಯೂನಿಯನ್ ಗಳು ಈ ಪಾದಯಾತ್ರೆಯಲ್ಲಿ ಕೈ ಜೋಡಿಸಿದ್ದು, 5000 ಸಾವಿರ ಮಂದಿ ಒಟ್ಟು ಸೇರುವ ನಿರೀಕ್ಷೆ ಇದೆ
ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸಾರಿಗೆ ಉದ್ಯಮಿ , "ಪ್ರತಿ ತಿಂಗಳು 34,000 ಟೋಲ್ ದೊಡ್ಡ ಬಸ್ ಗಳಿಕೆ ವಾಹನಕ್ಕೆ ಮತ್ತು 26,000 ದಷ್ಟು ಲಘು ವಾಹನಗಳಿಗೆ ಪಾವತಿಸ ಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಸಾರ್ವಜನಿಕರ ಹಣವನ್ನು ಸರಕಾರವೇ ವ್ಯರ್ಥ ಮಾಡುತ್ತಿದೆ" ಎಂದು ಹೇಳಿದರು.
ರಮೇಶ್ ಕೋಟ್ಯಾನ್ , ಟ್ಯಾಕ್ಸಿ ಅಸೋಸಿಯೇಷನ್ ಕಾರ್ಯದರ್ಶಿ, ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ, ಕಟ್ಟಡ ಕಾರ್ಮಿಕ ಸಂಘಟನೆ, , ಅಬ್ದುಲ್ ಅಜೀಜ್ ಉಪಸ್ಥಿತರಿದ್ದರು