ಪುತ್ತೂರು, ಮಾ 12 (DaijiworldNews/MS): ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರ್ನಾಟಕ-ಕೇರಳ ಗಡಿಯ ಈಶ್ವರಮಂಗಲದ ಮೈಯಳ ಎಂಬಲಿ ಮಾ.12 ರ ಶನಿವಾರ ನಡೆದಿದೆ.
ಮೃತರನ್ನು ಈಶ್ವರಮಂಗಲದ ಮೈಯಳ ನಿವಾಸಿ ಜೀವನ್(24) ಎಂದು ಗುರುತಿಸಲಾಗಿದೆ. ಈತ ಲೈಟಿಂಗ್ಸ್, ಸೌಂಡ್, ಶಾಮಿಯಾನ ಮುಂತಾದ ಕೆಲಸ ನಿರ್ವಹಿಸುತ್ತಿದ್ದ. ಈತ ದೇಲಂಪಾಡಿ ಹಿಂದೂ ಐಕ್ಯ ವೇದಿಕೆ ಘಟಕದ ಕಾರ್ಯಕರ್ತ. ಮೃತರು ತಂದೆ, ತಾಯಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821