ಮಂಗಳೂರು, ಮಾ. 07 (DaijiworldNews/SM): ವಿದ್ಯಾರ್ಥಿನಿ ಹಿಬಾ ಶೇಖ್ ಮೇಲೆ ಎಫ್ ಐಆರ್ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿದ್ಯಾರ್ಥಿನಿ ಹಿಬಾ ಶೇಖ್ ಸುದ್ದಿಗೋಷ್ಟಿ ನಡೆಸಿ ಖಂಡಿಸಿದ್ದಾರೆ.
ಸಾಯಿ ಸಂದೇಶ್, ಇತರರ ವಿರುದ್ಧ ದೌರ್ಜನ್ಯ ಕೇಸ್ ಹಾಕಿದ್ದೆ. ಆದರೆ ಅದಕ್ಕೆ ಪೂರಕವಾದ ಸೆಕ್ಷನ್ ಹಾಕಿಲ್ಲ. ಯಾಕಾಗಿ ದೌರ್ಜನ್ಯ ಸೆಕ್ಷನ್ ಹಾಕಿಲ್ಲ ಎಂದು ಕಮೀಷನರ್ ಉತ್ತರಿಸಬೇಕಿದೆ. ಸಾಯಿ ಸಂದೇಶ್ ಗೆ ಬಂದಿರುವ ಕೊಲೆ ಬೆದರಿಕೆಗೂ ನಮಗೂ ಸಂಬಂಧವಿಲ್ಲ. ಅಂತಹ ಪೋಸ್ಟ್ ಗಳನ್ನು ನಾವ್ಯಾರೂ ಒಪ್ಪಿಕೊಳ್ಳಲಾರೆವು. ಆದರೆ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಕವನಾ ಶೆಟ್ಟಿ ಎಂಬಾಕೆ ಸುಳ್ಳು ಆರೋಪ ಹೊರಿಸಿ ದೂರು ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಎಬಿವಿಪಿ ಕಾರ್ಯಕರ್ತೆ ಕವನಾ ಶೆಟ್ಟಿಯಿಂದ ಸುಳ್ಳು ದೂರು ನೀಡಿದ್ದು, ಕವನಾ ಶೆಟ್ಟಿ ಘಟನಾ ಸ್ಥಳದಲ್ಲಿ ಇರಲೇ ಇಲ್ಲ. ನಾನು ಮತ್ತು ನನ್ನ ಸಹಪಾಠಿ ಬೆದರಿಸಿದ್ದಾಗಿ ದೂರು ನೀಡಿದ್ದಾರೆ. ಆದರೆ ಸ್ಥಳದಲ್ಲಿ ಇಲ್ಲದವರ ಮೇಲೂ ಕೇಸ್ ದಾಖಲಾಗಿದೆ. ಜಾಲತಾಣದಲ್ಲಿ ಬರುವ ಬೆದರಿಕೆಗೂ ನಮಗೂ ಸಂಬಂಧವಿಲ್ಲ. ಆದರೆ ಅದನ್ನ ನಾವೇ ಮಾಡಿದ್ದಾಗಿ ಸುಳ್ಳು ಆರೋಪಿಸಲಾಗಿದೆ. ಸಾಯಿ ಸಂದೇಶ್ ಮತ್ತು ಸಹಚರರ ಮೇಲೆ ಕ್ರಮ ಆಗಬೇಕು ಎಂದು ಸುದ್ದಿಗೋಷ್ಟಿಯಲ್ಲಿ ವಿದ್ಯಾರ್ಥಿನಿ ಹಿಬಾ ಶೇಖ್ ಒತ್ತಾಯಿಸಿದ್ದಾರೆ.