ಮಂಗಳೂರು, ಮಾ 05 (DaijiworldNNews/HR): ಮಾಜಿ ಕೇಂದ್ರದ ವಿತ್ತ ಸಚಿವರು, ಹಿರಿಯ ಕಾಂಗ್ರೆಸ್ ನಾಯಕರಾದ ಬಿ. ಜನಾರ್ದನ ಪೂಜಾರಿಯವರ ಆತ್ಮಚರಿತ್ರೆ ಪುಸ್ತಕ ಎರಡನೇ ಆವೃತ್ತಿ ಶೀಘ್ರದಲ್ಲಿಯೇ ಬಿಡುಗಡೆಗೊಳ್ಳಲಿದೆ.
ಒಂದನೇ ಆವೃತ್ತಿ ಬಿಡುಗಡೆ ನಂತರ ಕೆಲವೊಂದು ಸತ್ಯ ಘಟನೆಗಳು ನಡೆದಿದ್ದು, ಅದು ಅದರಲ್ಲಿ ಬರೆಯಲಾಗಿದೆ. ಪುಸ್ತಕಕ್ಕೆ ಅಂತಿಮ ರೂಪುರೇಷೆ ನೀಡಲಾಗಿದ್ದು, ಶ್ರೀ ಪೂಜಾರಿಯವರು ಇದನ್ನು ತಮ್ಮ ನಿವಾಸದಲ್ಲಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಂ. ಜಿ. ಹೆಗ್ಡೆ, ಕರುಣಾಕರ್ ಶೆಟ್ಟಿ, ರಮಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.