ಉಡುಪಿ, ಮಾ. 04 (DaijiworldNews/SM): ಬೆಂಗಳೂರಿನ ಸ್ವರ್ಣ ಭಾರತ್ ಫೌಂಡೇಶನ್ ವತಿಯಿಂದ ನೀಡಲಾಗುವ ಪ್ರತಿಷ್ಟಿತ ಪ್ರೈಡ್ ಆಫ್ ಬೆಂಗಳೂರು ಪ್ರಶಸ್ತಿ 2021ರ ಮಹಿಳಾ ವಿಭಾಗದ ಸಾಧನಾ ಪ್ರಶಸ್ತಿಯನ್ನು ಉಡುಪಿಯ ವಿದ್ಯಾ ಸರಸ್ವತಿ ಅವರಿಗೆ ನೀಡಲಾಗಿದೆ.
ಪ್ರಶಸ್ತಿಯನ್ನು ಮಾಜಿ ಲೋಕಾಯುಕ್ತರಾದ ನಿಟ್ಟೆ ಸಂತೋಷ್ ಹೆಗ್ಡೆ ಅವರ ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು. ವಿದ್ಯಾ ಸರಸ್ವತಿ ಅವರು ತಮ್ಮ 50ನೇ ವಯಸ್ಸಿನಲ್ಲಿ, 2021-2022ರ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಾರಿಯರ್ ಕ್ವೀನ್ ಆಫ್ ಮಿಸೆಸ್ ಇಂಡಿಯಾ ಕರ್ನಾಟಕ 2021 ಮತ್ತು ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಉಡುಪಿ 2021 ಎಂಬ ಎರಡು ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.