ಮಂಗಳೂರು, ಮಾ 04 (DaijiworldNews/HR): ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಉಚಿತ ಆಹಾರ ಮತ್ತು ಸಹಾಯವಾಣಿಯನ್ನು ಮೂಡುಬಿದಿರೆಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮೂಲಕ ನ್ಯೂಯಾರ್ಕ್ ಮೂಲದ ಶಿಷ್ಯರು ಭರವಸೆ ನೀಡಿದ್ದಾರೆ.
ಮೂಡುಬಿದಿರೆಯ ಸ್ವಾಮೀಜಿಯವರು ಪೋಲೆಂಡ್ ಗುರುದ್ವಾರ ಪ್ರತಿನಿಧಿಗಳನ್ನು ಸಂಪರ್ಕಿಸಿ ಗುರುದ್ವಾರ ಕಮಿಟಿಯ ಜೆ ಜೆ ಸಿಂಗ್ ಅವರಿಗೆ ಅಭಿನಂದನೆಗಳನ್ನು ತಿಳಿಸಿ ಗುರುದ್ವಾರದ ಕಾರ್ಯ ಶ್ಲಾಘಿಸಿದ್ದಾರೆ. ಈ ಸಹಾಯ ಮಾಹಿತಿ ಎಲ್ಲಾ ನೊಂದ ವಿದ್ಯಾರ್ಥಿಗಳ ಹೆತ್ತವರ ಕುಟುಂಬಕ್ಕೆ ತಲುಪಿಸಲು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅಥವಾ ಕುಟುಂಬದ ಸದಸ್ಯರು ಸಹಾಯಕ್ಕಾಗಿ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಲು ಕೋರಲಾಗಿದೆ:
ಗುರುದ್ವಾರ ಶ್ರೀ ಗುರು ಸಿಂಗ್ ಸಭಾ, ವಾರ್ಸಾ (ಸಿಖ್ ದೇವಾಲಯ)
ಸಂಪರ್ಕ ಸಂಖ್ಯೆ: +48 602 666 666