ಸುರತ್ಕಲ್, ಮಾ 04 (DaijiworldNews/MS): ಐದನೆ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಮುಕ್ಕ ಬಳಿ ಮಾ.03 ರ ಬುಧವಾರ ಸಂಜೆ ನಡೆದಿದೆ.
ಎನ್ಐಟಿಕೆಯ ಅಸಿಸ್ಟೆಂಟ್ ಪ್ರೊಫೆಸರ್ ಮನೀಶ್ ಕುಮಾರ್ (36) ಎಂಬವರು ಗಂಭೀರ ಗಾಯಗೊಂಡವರು.
ಮೂಲತಃ ಉತ್ತರ ಪ್ರದೇಶ ದವಾರಿಯಾ ಜಿಲ್ಲೆಯವರಾದ ಅಶೋಕ್ ಕುಮಾರ್ ಎಂಬವರ ಪುತ್ರನಾಗಿರುವ ಮನೀಶ್ ಕುಮಾರ್ ಬುಧವಾರ ಸಂಜೆ ಸುಮಾರು 5:30ಕ್ಕೆ ಮುಕ್ಕದ ಬಾಡಿಗೆ ಮನೆಯ ಐದನೆ ಮಹಡಿಯಲ್ಲಿ ಏರ್ಟೆಲ್ ಡಿಶ್ ಜೋಡಿಸುವ ವೇಳೆ ಆಯತಪ್ಪಿ ಫೈಬರ್ ಶೀಟ್ಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.