ಕಾಸರಗೋಡು, ಮಾ.03 (DaijiworldNews/SM): ಗೇರುಮರದ ಹಿತ್ತಿಲಿಗೆ ಬಿದ್ದ ಬೆಂಕಿಯನ್ನು ನಂದಿಸಲೆತ್ನಿಸಿದ ವೃದ್ಧರೋರ್ವರು ಕೆನ್ನಾಲೆಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಬೇಡಡ್ಕದಲ್ಲಿ ನಡೆದಿದೆ.
ಪಳ್ಳತುಂಗಾಳ್ ಕುಂಡುಪಾರೆಯ ಗೋಪಾಲ(70) ಮೃತಪಟ್ಟವರು. ಮನೆಯ ಸಮೀಪದ ಸುಮಾರು ನಾಲ್ಕು ಎಕರೆಯಷ್ಟು ಸ್ಥಳದ ಗೇರುತೋಟದದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ನಂದಿಸಲು ತೆರಳಿದ್ದ ಸಂದರ್ಭದಲ್ಲಿ ಬೆಂಕಿಯ ಕೆನ್ನಾಲಿಗೆ ಸಿಲುಕಿದ್ದಾರೆ. ಗಂಭೀರ ಸುಟ್ಟ ಗಾಯಗೊಂಡ ಗೋಪಾಲರನ್ನು ಕಾಞ೦ಗಾಡ್ ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಬಳಿಕ ಪರಿಸರವಾಸಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.