ಬಂಟ್ವಾಳ, ಮಾ.02 (DaijiworldNews/SM): ಮತಾಂತರ ಕಾಯ್ದೆಯನ್ನು ನೆಪವಾಗಿಟ್ಟುಕೊಂಡು ದೇಶ ಹಾಗೂ ರಾಜ್ಯದ್ಯಂತ ಕೈಸ್ತರ ಮೇಲೆ ಹಾಗೂ ಆರಾಧನಾ ಕೇಂದ್ರಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತರು ಮೌನವಾಗಿ ಶಾಂತಿಯುತವಾಗಿ ಪ್ರತಿಭಟಿಸಿದ್ದು, ಗ್ರಾಮೀಣ ಭಾಗದಲ್ಲೂ ಕ್ರೈಸ್ತರು ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆದಿದ್ದು, ಗ್ರಾಮೀಣ ಭಾಗದಲ್ಲೂ ಕ್ರೈಸ್ತರು ಖಂಡನೆ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಬಿ.ಸಿ. ರೋಡ್ ಜಂಕ್ಷನ್ ನಲ್ಲಿ ಶಾಂತಿ ಪ್ರತಿಭಟನೆ ನಡೆಸಿದ ಕ್ರೈಸ್ತರು ಬಳಿಕ ಬಂಟ್ವಾಳ ತಹಶೀಲ್ದಾರ್ ರಶ್ಮಿಯವರಿಗೆ ಮನವಿ ಸಲ್ಲಿಸಿದರು.
ಬಂಟ್ವಾಳ, ಮೊಗರ್ನಾಡ್ ವಾಳೆಗಳ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಿವಿಧ ಚರ್ಚ್ ಗಳ ಧರ್ಮಗುರುಗಳು ಧರ್ಮಭಗಿಣಿಯರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇನ್ನು ಮಂಗಳೂರಿನ ಹೊರವಲಯದ ಅದ್ಯಪಾಡಿ, ಸೈಂಟ್ ಜೋಸೆಫ್ ಚರ್ಚ್ ಪೆಜಾರ್, ಸೈಂಟ್ ಆಂಟೋನಿ ಚರ್ಚ್ ಆಂಥೋನಿಕಟ್ಟೆ ಸೇರಿ ವಿವಿಧ ಚರ್ಚ್ ಗಳಲ್ಲಿ ಮಾನವ ಸರಪಳಿ ಬೆಂಬಲಿಸಿ ಮೌನ ಪ್ರತಿಭಟನೆ ನಡೆಸಲಾಯಿತು.