ಮಂಗಳೂರು, ಫೆ 26 (DaijiworldNews/HR): ವಿಧಾನ ಸಭಾ ಕಲಾಪ ಸಮರ್ಪಕವಾಗಿ ನಡೆಯದಿರಲು ಬಿಜೆಪಿಯ ಸಂವಿಧಾನ ವಿರೋಧಿ ಧೋರಣೆ ಕಾರಣ ಎಂದು ವಿಧಾನ ಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು, ಬಿಜೆಪಿ ಮುಖಂಡರು ರಾಷ್ಟ್ರ ಧ್ವಜಕ್ಕೆ, ದೇಶಕ್ಕೆ ಅವಮಾನ ಮಾಡಿದ್ದು, ಕೇಂದ್ರ ನಾಯಕರು ಈಶ್ವರಪ್ಪನವರನ್ನು ಬೆಂಬಲಿಸುತ್ತಿರುವುದು ವಿಷಾದನೀಯ. ಇದರಿಂದ ಬಿಜೆಪಿಯ ಮುಖವಾಡ ಕಳಚಿದೆ ಎಂದಿದ್ದಾರೆ.
ಇನ್ನು ಸದನ ನಡೆಸಲು ಕಾಂಗ್ರೆಸ್ ಅಡ್ಡಿ ಪಡಿಸಿದೆ ಎನ್ನುವ ಬಿಜೆಪಿ ಮುಖಂಡ ರ ಹೇಳಿಕೆ ಸರಿಯಲ್ಲ. ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಸಾಕಷ್ಟು ಸಮಸ್ಯೆ ಗಳ ಬಗ್ಗೆ ಚರ್ಚೆ ಆಗಿದೆ. ಆದರೆ ಯಾವುದೂ ಅನುಷ್ಠಾನ ಆಗ್ತಾ ಇಲ್ಲಾ. ಬಡವರಿಗೆ,ಮನೆ,ನಿವೇಶನ, ಪಡಿತರ ಚೀಟಿ ದೊರೆಯುತ್ತಿಲ್ಲ. ಸರಕಾರ ತನ್ನ ಹೊಣೆಗಾರಿಕೆ ಯನ್ನು ನಿರ್ವಹಿಸುತ್ತಿಲ್ಲ ಎಂದರು.
ಉಳ್ಳಾಲ ದ ರಾಣಿ ಅಬ್ಬಕ್ಕ ನ ಬಗ್ಗೆ ಗೌರವ ವಿದ್ದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಲಾದ 8ಕೋಟಿ ರೂ ಭವನದ ಯೋಜನೆ ಯನ್ನು ಕೈ ಗೆತ್ತಿಕೊಳ್ಳಲಿ. ಲೇಡಿಗೋಶನ್ ಆಸ್ಪತ್ರೆಯ ಹೆಸರು ಬದಲಾಯಿಸುವ ಬದಲು ಅಲ್ಲಿಗೆ ಇನ್ನಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಲಿ ಎಂದಿದ್ದಾರೆ.
ಇನ್ನು ಬ್ಯಾರಿ ಭವನದ ನಿರ್ಮಾಣದ ವಿಚಾರದಲ್ಲಿ ಬಿಜೆಪಿ ಪ್ರೇರೀತ ಪ್ರತಿಭಟನೆ ನಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್ ನ ಪಾತ್ರ ಇಲ್ಲ ಎಂದರು.
ರಷ್ಯಾ-ಉಕ್ರೇನ್ ನಲ್ಲಿ ಯುದ್ಧದ ವಾತವರಣ ಉಂಟಾದ ಸಂದರ್ಭದಲ್ಲಿ ಭಾರತ ಸರಕಾರ ಸಕಾಲದಲ್ಲಿ ಎಚ್ಚೆತ್ತುಕೊ ಳ್ಳದೆ ಇರುವ ಕಾರಣ ಅಲ್ಲಿ ಕೆಲವು ಭಾರತೀಯರು ಆತಂಕದ ಲ್ಲಿ ರುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಾಹುಲ್ ಹಮೀದ್, ಸಂತೋಷ್ ಕುಮಾರ್ ಶೆಟ್ಟಿ, ಜಕ್ರೀಯ, ಮುರಳಿ ನರಿಂಗಾನ,ಮನಪಾ ಸದಸ್ಯ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.