ಉಡುಪಿ, ಫೆ 26 (DaijiworldNews/HR): ನಿಜವಾಗಿ ಮುಸ್ಲಿಮರಿಗೆ ಶರಿಯತ್ ಪ್ರಕಾರ ಹೋಗುವುದಾದರೆ ಹರ್ಷನನ್ನು ಕೊಂದ ಆರು ಮಂದಿ ಆರೋಪಿಗಳನ್ನು ಬಿಡುಗಡೆ ಗೊಳಿಸಿ ಸಾರ್ವಜನಿಕರಿಂದ ಕಲ್ಲೊಡೆಯಲು ಅವಕಾಶ ಕೊಡಿ. ಶರಿಯತ್ ಪ್ರಕಾರ ಕೊಲೆ , ಅತ್ಯಾಚಾರದಂತಹ ಕೃತ್ಯ ನಡೆದಾಗ ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸುತ್ತಾರೆ. ಹಿಜಾಬ್ನಿಂದ ರಾಷ್ಟ್ರಕ್ಕೆ ಗಂಡಾಂತರವಿದೆ. ಇದು ಅಂತಾರಾಷ್ಟ್ರೀಯ ಷಡ್ಯಂತ್ರ ಇದರ ಹಿಂದೆ ಇದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಮಣಿಪಾಲ ಟೈಗರ್ ಸರ್ಕಲ್ ಬಳಿ ಕಾಂಗ್ರೆಸ್ ವಿರುದ್ಧ, ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತರಗತಿ ಒಳಗೆ ಹಿಜಾಬ್ ಹಾಕಲು ಬೇಕು ಎನ್ನುವ ಕಟ್ಟಾ ಶರಿಯತ್ ವಾದಿಗಳು ಅವರು ಎಲ್ಲವನ್ನು ಪಾಲಿಸುತ್ತಾರೆ ಅಂತಾದರೆ, ನಾವು ಅವರಿಗೆ ಸ್ವಲ್ಪ ತ್ಯಾಗ ಮಾಡಲು ಸಿದ್ದರಿದ್ದೇವೆ. ನಾವು ಸಂವಿಧಾನವನ್ನು ಒಪ್ಪುವವರು, ಅವರು ಶರಿಯತ್ ನ್ನು ಒಪ್ಪುವವರು, ಅವರಿಗೆ ಅದರಲ್ಲಿ ಇರುವ ಎಲ್ಲ ಕಾನೂನುನ್ನು ಕಡ್ಡಾಯಮಾಡಿ. ಈ ಹಿಂದೆ ಹಿಜಾಬ್ ತೆಗೆದು ತರಗತಿ ಒಳಗೆ ಬಂದವರನ್ನು ತುಂಬಾ ಗೌರವಿಸುತ್ತೇವೆ ಕಾಂಗ್ರೆಸ್ ಹಿಜಾಬ್ ವಿಷಯದಲ್ಲಿ ಪಲಾಯನವಾದ ಮಾಡಬೇಡಿ ಎಂದರು.
ಹಿಂದುಗಳ ಶಾಂತಿಯನ್ನು ಪರೀಕ್ಷಿಸಬೇಡಿ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಬೇಡಿ. ಹಿಂದುಗಳು ಸುಮ್ಮನಿರಲ್ಲ. ಪಿಎಫ್ ಐ, ಎಸ್ ಡಿಪಿ ಐ ವಿರುದ್ಧ ಹೋರಾಡಲು ನಮ್ಮ ಹಿಂದು ಕಾರ್ಯಕರ್ತರು ಸಿದ್ದರಿದ್ದಾರೆ. ರಾಷ್ಟ್ರದ್ವಜದ ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಬೇಡಿ, ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಹಿಜಾಬ್ ವಿಚಾರವನ್ನು ಬೇರೆಡೆ ತಿರುಗಿಸುವುದಕ್ಕಾಗಿ ಈಶ್ವರಪ್ಪನವರು ಉಲ್ಲೇಖಿಸಿದ ಭಗವಾ ದ್ವಜದ ವಿಚಾರವನ್ನು ಕಾಂಗ್ರೆಸ್ ಪುನರುಚ್ಚರಿಸುತ್ತಿದೆ. ಅವರು ರಾಷ್ಟ್ರದ್ವಜಕ್ಕೆ ಅವಮಾನ ಮಾಡಿಲ್ಲ. ಮುಂದೊಂದು ದಿನ ಭಾಗವ ದ್ವಜ ರಾಷ್ಟ್ರ ದ್ವಜ ಆಗಬಹುದೆಂದು ನಾನು ಹೇಳುವೆ. ವಿಧಾನ ಮಂಡಲ ಅಧಿವೇಶನ ಹಿಜಾಬ್ ಬರುತ್ತೆಂದು ಸದನ ಮುಂದುವೆರೆಯಲು ಅವಕಾಶವನ್ನೇ ಕೊಡಲಿಲ್ಲ ಎಂದಿದ್ದಾರೆ.
ಇನ್ನು ಕಾಪುವಿನಲ್ಲಿ ಈಗಷ್ಟೆ ಎಸ ಡಿಪಿ ಐ ನ ಮೂರು ಖಾತೆ ತೆರೆದಿದೆ. ಈಗ ಅದನ್ನೇ ವೋಟ್ ಬ್ಯಾಂಕ್ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಈ ರಾಜಕೀಯ ಮಾಡುತ್ತಿದೆ. ಹೈಕೋರ್ಟ್ ತೀರ್ಮಾನವನ್ನು ಪಾಲನೆ ಮಾಡುವಷ್ಟು ಸೌಜನ್ಯ ಮಕ್ಕಳಿಗಿಲ್ಲ. ನೀವು ಶರಿಯತ್ ನ್ನೇ ಪಾಲನೆ ಮಾಡುವುದಾದರೆ ಶರಿಯತ್ ಪಾಲಿಸುವ ದೇಶಕ್ಕೆ ಹೋಗಿ. ಇಂತಹ ಕೃತ್ಯಗಳು ಹರ್ಷನ ಕೊಲೆಯಲ್ಲಿ ಅಂತ್ಯವಾಗಲಿ, ಇಲ್ಲವಾದರೆ ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಉಳಿಯಲು ಕಷ್ಟ ಆಗಬಹುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಬಿಜೆಪಿ ನಾಯಕರಾದ ಮಟ್ಟಾರು ರತ್ನಾಕರ್ ಹೆಗ್ಡೆ , ವೀಣಾ ಶೆಟ್ಟಿ, ಶ್ರೀಶ ನಾಯಕ್, ನವೀನ್ ಕುತ್ಯಾರು, ಮನೋಹರ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.