ಕಾರ್ಕಳ, ಫೆ 24 (DaijiworldNews/HR): ನವದೆಹಲಿಯ ದಿ. ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ ಸಿಎ ಪರೀಕ್ಷೆಯಲ್ಲಿ ದೀಪೇಶ್ ಶೆಟ್ಟಿ ಇವರು 476 ಅಂಕಗಳನ್ನು ಪಡೆದು ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ.
ಡಿಸೆಂಬರ್ 2021ರಲ್ಲಿ ನವದೆಹಲಿಯ ದಿ. ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ದೀಪೇಶ್ ಶೆಟ್ಟಿ ಮುಂಬೈ ಅವರು 476 ಅಂಕಗಳನ್ನು ಪಡೆಯುವುದರ ಮೂಲಕ ಸಿಎ ಪರೀಕ್ಷೆಯ ಎಲ್ಲಾ ಹಂತಗಳನ್ನು ತೇರ್ಗಡೆ ಹೊಂದಿ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ.
ಇವರು ನಂದಳಿಕೆ ವಸಂತ್ ಸಾಧು ಶೆಟ್ಟಿ ಮತ್ತು ಬೋಳ ಅಗ್ಗ್ಯೊಟ್ಟು ಪಪ್ಪಾ ಶೆಟ್ಟಿ ದಂಪತಿಗಳ ಪುತ್ರ
ಕಲ್ಯಾಣ್ನ ಅತ್ತರ್ ಅಸೋಸಿಯೇಟ್ಸ್ನ ಸಂಜಯ್ ಗಾಂಗಲ್ರವರಿಂದ ಅರ್ಟಿಕಲ್ ಶಿಟ್ಸ್ ತರಬೇತಿ ಪಡೆದಿರುತ್ತಾರೆ.