ಉಡುಪಿ, ಫೆ 23 (DaijiworldNews/HR): ಹೈಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಬೇಕು. ಈ ಬಗ್ಗೆ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಪರೀಕ್ಷೆ ಮುಂದೂಡಿದರೆ ಉಳಿದವರಿಗೂ ಹೆಚ್ಚಿನ ಪ್ರಮಾಣದಲ್ಲಿ ಅಭ್ಯಾಸ ಮಾಡಬಹುದು. ಕಳೆದ ಎರಡು ತಿಂಗಳಿನಿಂದ ನಮಗೆ ಕಲಿಕೆ ನಡೆಸಲು ಆಗುತಿಲ್ಲ. ನಮಗೆ ಮಾನಸಿಕ ವಾಗಿ ಕಿರುಕುಳ ಆಗುತ್ತಿದೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯರು, ಒಂದು ತಿಂಗಳಿಂದ ನಮಗೆ ಬೆದರಿಕೆ ಕರೆ ಬರುತ್ತಿದೆ. ನಮ್ಮ ಡಿಟೇಲ್ಸ್ ಲೀಕ್ ಆದ ಬಳಿಕ ನಮಗೆ ಬೆದರಿಕೆ ಕರೆ ಬರುತ್ತಿದೆ. ನಾವು ಈಗ ಮೊಬೈಲ್ ಕೂಡಾ ಬಳಕೆ ಮಾಡುತಿಲ್ಲ. ನಮ್ಮ ಜೊತೆಗೆ ಇದ್ದವರಿಗೆ ಹೊಡೆದಿದ್ದಾರೆ, ನಮ್ಮ ಸ್ನೇಹಿತೆಯ ತಂದೆಯ ಹೋಟೆಲ್ ದ್ವಂಸ ಮಾಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ಹಿಜಾಬ್ಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಕುಟುಂಬವನ್ನು ಇದರಲ್ಲಿ ಮಧ್ಯದಲ್ಲಿ ತರಬೇಡಿ ಎಂದಿದ್ದಾರೆ.
ಇನ್ನು ಟೆರರಿಸ್ಟ್ ಸಂಪರ್ಕ ಬಗ್ಗೆ ನಾವು ಕಮೆಂಟ್ ಮಾಡಲ್ಲ. ಅಧಿಕಾರಿಗಳು ಪರೀಕ್ಷೆ ಮುಂದೂಡುವ ಬಗ್ಗೆ ಸರ್ಕಾರದ ಬಗ್ಗೆ ಮಾತಾಡುತ್ತೇವೆ ಅಂದಿದ್ದಾರೆ. ಇವತ್ತು ಡಿಡಿಪಿಐ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಕೋರ್ಟ್ ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ. ಸದ್ಯ ನಡೆಯುತ್ತಿರುವುದು ಪೊಲಿಟಿಕಲ್ ಗೇಮ್. ಕೋರ್ಟ್ ತೀರ್ಪು ಆದಷ್ಟು ಬೇಗ ಬರಬೇಕು ಎಂದು ಹೇಳಿದ್ದಾರೆ.