ಮಂಗಳೂರು, ಫೆ. 22 (DaijiworldNews/SM): ಸಂದೇಶ ಪ್ರತಿಷ್ಠಾನದ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿ 2021 ಹಾಗೂ 2022 ಪ್ರದಾನ ಕಾರ್ಯಕ್ರಮ ಮಂಗಳೂರಿನ ನಂತೂರ್ ನ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನೆರವೇರಿತು.
ಈ ವೇಳೆ 2021-2022 ರ ಸಂದೇಶ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 8 ಸಾಧಕರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ, ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ಪ್ರಶಸ್ತಿ ವಿಜೇತರು ಯುವ ಪೀಳಿಗೆಗೆ ಸ್ಫೂರ್ತಿಯಾಗುತ್ತಾರೆ. ಸಂದೇಶವು ಈ ಪ್ರಶಸ್ತಿಗೆ ಅರ್ಹರಾದ ಸಾಧಕರನ್ನು ಗುರುತಿಸಿದೆ. ಅದೇ ಸಮಯದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಹೆಚ್ಚಿನದನ್ನು ಸಾಧಿಸಲು ಮತ್ತು ಒಂದು ಹೆಜ್ಜೆ ಮುಂದಿಡಲು ಸಂದೇಶವನ್ನು ರವಾನಿಸುತ್ತದೆ ಎಂದರು.
ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಅತೀ ವಂ. ಫಾ. ಹೆನ್ರಿ ಡಿ ಸೋಜಾ ಮಾತನಾಡಿ, ‘ಪ್ರಶಸ್ತಿ ಪುರಸ್ಕೃತರು ಎಲ್ಲ ಅಡೆತಡೆಗಳನ್ನು ದಾಟಿ ಈ ಎತ್ತರವನ್ನು ತಲುಪಲು ಮುಂದೆ ಬಂದಿದ್ದು ಎಲ್ಲರಿಗೂ ಪ್ರೋತ್ಸಾಹದಾಯಕವಾಗಿದೆ ಎಂದರು.
ಸಂದೇಶ ಪ್ರಶಸ್ತಿ 2021 ಪುರಸ್ಕೃತರು
ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ) - ಬರಗೂರು ರಾಮಚಂದ್ರಪ್ಪ
ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ) - ಅಮರ್ ಕೊಂಕಣಿ
ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು) - ಡಾ ಸುನೀತಾ ಶೆಟ್ಟಿ
ಸಂದೇಶ ಮಾಧ್ಯಮ ಪ್ರಶಸ್ತಿ- ನಾಗೇಶ ಹೆಗಡೆ
ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ - ಮೀನಾ ರೆಬಿಂಬಸ್
ಸಂದೇಶ ಕಲಾ ಪ್ರಶಸ್ತಿ - ಅವಿತಾಸ್ ಅಡಾಲ್ಫಸ್ ಕುಟಿನ್ಹಾ(ಡೊಲ್ಲಾ)
ಸಂದೇಶ ಶಿಕ್ಷಣ ಪ್ರಶಸ್ತಿ - ಲಕ್ಷ್ಮಣ್ ಸಾಬ್ ಚೌರಿ
ಸಂದೇಶ ವಿಶೇಷ ಪ್ರಶಸ್ತಿ - ವಿಕಲಚೇತನರಿಗಾಗಿ ಸಮರ್ಥನಂ ಟ್ರಸ್ಟ್
ಸಂದೇಶ ಪ್ರಶಸ್ತಿ 2022 ಪುರಸ್ಕೃತರು
ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ) - ರಹಮತ್ ತರೀಕೆರೆ
ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ) - ಮೆಲ್ವಿನ್ ರೊಡ್ರಿಗಸ್
ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು) - ಬಿ ಕೆ ಗಂಗಾದರ್ ಕಿರೋಡಿಯನ್
ಸಂದೇಶ ಮಾಧ್ಯಮ ಪ್ರಶಸ್ತಿ - ಡಾ ಟಿ. ಸಿ. ಪೂರ್ಣಿಮಾ
ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ - ಆಲ್ವಿನ್ ನೊರೊನ್ಹಾ
ಸಂದೇಶ ಕಲಾ ಪ್ರಶಸ್ತಿ- ಕಾಸರಗೋಡು ಚಿನ್ನಾ
ಸಂದೇಶ ಶಿಕ್ಷಣ ಪ್ರಶಸ್ತಿ - ಡಾ ಪಿ ಕೆ ರಾಜಶೇಖರ್
ಸಂದೇಶ ವಿಶೇಷ ಪ್ರಶಸ್ತಿ - ಸಾ. ಆರ್. ರಘುನಾಥ್