ಉಡುಪಿ, ಫೆ 22 (DaijiworldNews/MS): ಶಿವಮೊಗ್ಗದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಭಜರಂಗದಳದ ಕಾರ್ಯಕರ್ತ ಹರ್ಷ ನಿವಾಸಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಭೇಟಿ ನೀಡಿ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸಿದರು.
ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ನೆಲೆಯಲ್ಲಿ ರೂ. 1 ಲಕ್ಷ ಮೊತ್ತದ ಚೆಕ್ ನೀಡಿ ಈ ಸಂಕಷ್ಟದ ಸಂದರ್ಭದಲ್ಲಿ ಸಮಸ್ತ ಹಿಂದೂ ಸಮಾಜ ಕುಟುಂಬದ ಜತೆ ನಿಲ್ಲುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದಯಶಪಾಲ್ ಸುವರ್ಣ, "ಹರ್ಷನ ಹತ್ಯೆಗೆ ಜಿಹಾದಿ ಸಂಘಟನೆಯ ಕೈವಾಡ ಇದೆ.ಅವರದೇ ಭಾಷೆಯಲ್ಲಿ ನಾವು ಉತ್ತರ ಕೊಡುವ ಕೆಲಸ ಮಾಡುತ್ತೇವೆ.ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ. ಮಗನ ಸ್ಥಾನದಲ್ಲಿ ನಿಂತು ಕುಟುಂಬಕ್ಕೆ ನೆರವಾಗುತ್ತೇವೆ.ಇದು ಹಿಜಾಬ್ ನ ಗಲಾಟೆಯ ಭಾಗವಾಗಿ ಈ ದುರ್ಘಟನೆ ನಡೆದಿದ್ದು ಈ ಗಲಾಟೆಯಲ್ಲೂ ಜಿಹಾದಿಗಳ ಹುನ್ನಾರವಿತ್ತು ಎಂದು ಆರೋಪಿಸಿದರು.