ಕಾರ್ಕಳ, ಫೆ 21 (DaijiworldNews/HR): ಬಜರಂಗದಳ ಕಾರ್ಯಕರ್ತ ಹರ್ಷನನ್ನು ಬರ್ಬರ ರೀತಿಯಲ್ಲಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಕೊಲೆಗಡುಕರನ್ನು ಎನ್ಕೌಂಟರ್ ನಡೆಸಿ ತಕ್ಕ ಉತ್ತರ ನೀಡುವಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕು. ಅಂತಹ ಪೊಲೀಸರಿಗೆ ಅಮಾನತು ಮಾಡಿದಲ್ಲಿ ಪೊಲೀಸ್ ರಕ್ಷಣೆಗೆ ಸಂಘ ಪರಿವಾರ ಲಕ್ಷಾಂತರ ಕಾರ್ಯಕರ್ತರು ಜೊತೆಗಿರುತ್ತಾರೆ ಎಂದು ವಿಶ್ವಹಿಂದು ಪರಿಷತ್ನ ಸಹಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಹೇಳಿದರು.
ಶಿವಮೊಗ್ಗದಲ್ಲಿ ಬಜರಂಗದಳ ಕಲಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ಕಾರ್ಕಳ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ಆಯೋಜಿಸಿದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ದಿಕ್ಸೂಚಿ ಬಾಷಣ ಮಾಡಿದ್ದು, ಬಜರಂಗದಳ ತಾಲೂಕು ಸಂಚಾಲಕ ಚೇತನ ಪೇರಲ್ಕೆ ಪ್ರಸ್ತಾವಿಕವಾಗಿ ಮಾತನಾಡಿದರು.
ಕಳೆದ 16 ವರ್ಷಗಳಿಂದ ಧರ್ಮ ಮತ್ತು ಸಮಾಜಕ್ಕೆ ದುಡಿಯುತ್ತಿದ್ದ ಸಂಘ ಪರಿವಾರದ ಹಲವು ಕಾರ್ಯಕರ್ತರು ಬಲಿಯಾಗಿದ್ದಾರೆ. ಇನ್ನೆಷ್ಟು ಕಾರ್ಯಕರ್ತರ ಬಲಿಗಾಗಿ ಕಾಯುತ್ತಿದ್ದೀರಿ ಸರಕಾರವನ್ನು ಪ್ರಶ್ನಿಸಿದರು.
ಹಿಂದು ಸಮಾಜಕ್ಕೆ ತಲತಲಾಂತರ ವರ್ಷಗಳ ಇತಿಹಾಸವಿದೆ. ಹಲವು ಮತಗಳ ದಾಳಿಗೆ ತುತ್ತಾದರೂ ಮತ್ತೇ ಸಿಡಿದೆದ್ದು ನಿಂತಿದೆ. ಹಿಂದು ಧರ್ಮ ಹಿಂಸಾಚಾರವನ್ನು ಕಲಿಸಿಲ್ಲ. ಧರ್ಮಕ್ಕೆ ದಕ್ಕೆಯಾದಾಗ ಹಲವಾರು ಮಹಾಪುರುಷರು ಜನ್ಮನೀಡಿದ್ದರು. ಅವರಲ್ಲಿ ಶಿವಾಜಿ, ಭಗತ್ಸಿಂಗ್ ಸೇರಿದಂತೆ ಇನ್ನಿತರರು ಹೆಸರನ್ನು ಉಲ್ಲೇಖಿಸಿದರು. ದೇಶ, ಕಾನೂನು,ಸಂವಿಧಾನ, ಸಂಸ್ಕೃತಿಗೆ ಗೌರವ ನೀಡಿ ಬದುಕಲು ಕಲಿಯಿರಿ. ಅದು ಸಾಧ್ಯವಿಲ್ಲದೇ ಹೋದಲ್ಲಿ ತಮಗೆ ಬೇಕಾದ ಅನುಕೂಲ ಇರುವ ದೇಶವನಬ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಜಾತ್ಯತೀತ ನಿಲುವು ಹಿಂದು ಸಮಾಜವನ್ನು ನಿದ್ರಿಸುವಂತೆ ಮಾಡಿದೆ. ಹಿಂದುಗಳು ಪರಧರ್ಮ ಸಂಹಿಷ್ಟುರು. ಇಡೀ ಸಮಾಜ ಇರುವ ಶಾಲೆಗೆ ವಿದ್ಯಾರ್ಝನೆಗಾಗಿ ಹೋಗುವ ನೀವುಗಳು ಶಿಕ್ಷಣಕ್ಕೆ ಒತ್ತು ನೀಡಬೇಕೆ ಹೊರತು ಮತ ಆಚರಣೆ ಅಲ್ಲ. ಅಂತಹ ಆಚರಣೆ ಅಗತ್ಯವೆನಿಸಿದರೆ ನಿಮ್ಮದೇ ಆದ ಶಿಕ್ಷಣ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಳ್ಳಿ ಎಂದರು.
ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ್ಕುಮಾರ್, ಕಾರ್ಕಳ ವಿಶ್ವ ಹಿಂದು ಪರಿಷತ್ನ ಪ್ರಮುಖ ಸಾಣೂರು ಜಗದೀಶ್ ಪೂಜಾರಿ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು ಪಾಲ್ಗೊಂಡರು.