ಕಾಸರಗೋಡು, ಫೆ 21 (DaijiworldNews/HR): ನಾಪತ್ತೆಯಾಗಿದ್ದ ಖಾಸಗಿ ಹಣಕಾಸು ಸಂಸ್ಥೆಯ ನೌಕರನ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ನಗರದ ಬ್ಯಾಂಕ್ ರಸ್ತೆಯ ಖಾಸಗಿ ಹಣಕಾಸು ಸಂಸ್ಥೆಯ ನೌಕರ, ಮಲ್ಲ ಗೋಪಾಲಕೊಚ್ಚಿಯ ಹರ್ಷಿತ್ ಕುಮಾರ್ ( 38) ಮೃತಪಟ್ಟವರು.
ಎರಡು ದಿನಗಳಿಂದ ನಾಪತ್ತೆಯಾಗಿದ್ದ ಇವರ ಮೃತದೇಹ ಚಂದ್ರಗಿರಿ ಹೊಳೆಯ ತುರುತ್ತಿ ಎಂಬಲ್ಲಿ ಸೋಮವಾರ ಪತ್ತೆಯಾಗಿದೆ.
ಭಾನುವಾರ ಇವರ ಬೈಕ್ ಚಂದ್ರಗಿರಿ ಸೇತುವೆ ಸಮೀಪ ಪತ್ತೆಯಾಗಿದ್ದು, ಇದರಿಂದ ಸಂಶಯಗೊಂಡು ಅಗ್ನಿಶಾಮಕ ದಳದ ಸಿಬಂದಿಗಳು, ಪೊಲೀಸರು ಹೊಳೆಯಲ್ಲಿ ನಡೆಸಿದ್ದರು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಸೋಮವಾರ ತುರುತ್ತಿ ಎಂಬಲ್ಲಿ ಹೊಳೆ ಬದಿ ಮೃತದೇಹ ಪತ್ತೆಯಾಗಿದೆ.
ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.