ಮಂಗಳೂರು, ಫೆ.17 (DaijiworldNews/SM): ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಾಹುಲ್ ಹಮೀದ್ ಪ್ರತಿಕ್ರಿಯೆ ನೀಡಿದ್ದಾರೆ.
ನಾಲ್ಕು ಗೋಡೆ ಮಧ್ಯೆ ಮುಗಿಸಲು ಕಾಂಗ್ರೆಸ್ ಶ್ರಮಿಸಿದೆ. ಕೇವಲ ಒಂದು ಬಟ್ಟೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗಿದೆ. ಒಂದು ಬಟ್ಟೆ ದೇಶದ ಮಾನ ಹರಾಜು ಆಗುವಂತೆ ಮಾಡುತ್ತೆ ಎಂದು ಊಹಿಸಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ದೇಶದಲ್ಲಿ ಮುಸಲ್ಮಾನರು ಆತಂಕದಲ್ಲಿ ಇದ್ದಾರೆ ಎಂಬ ಎಸ್ಡಿಪಿಐ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲೆಯ ಭಯದ ವಾತಾವರಣ, ಆತಂಕ ಸೃಷ್ಟಿಗೆ ಬಿಜೆಪಿಯೊಂದಿಗೆ ಎಸ್ಡಿಪಿಐ ಸೇರಿದ್ದೆ ಕಾರಣ. ಕಳೆದ ಒಂದು ವರ್ಷದಲ್ಲಿ ಬಿಜೆಪಿ ಸಂಘಪರಿವಾರಕ್ಕೆ ನೀರು ಗೊಬ್ಬರ ಪೂರೈಸಿದ್ದೇ ಎಸ್ ಡಿಪಿಐ. ಜಿಲ್ಲೆಯಲ್ಲಿ ನಡೆದ ಅನೇಕ ಅಹಿತಕರ ಘಟನೆಗಳ ಹಿಂದೆ ಎಸ್ ಡಿಪಿಐ ಇತ್ತು. ಮೊದಲ ಎಸ್ ಡಿಪಿಐಯವರು ತಮ್ಮ ನಿಲುವನ್ನು ಸ್ಪಷ್ಟ ಪಡಿಸಲಿ ಎಂದರು. ಅಲ್ಲದೆ, ಉಡುಪಿ ಘಟನೆ ಬಗ್ಗೆ ತನಿಖೆ ಅಗತ್ಯವಿದೆ ಎಂದು ಅವರು ಮನವಿ ಮಾಡಿದ್ದಾರೆ.