ಕಾಸರಗೋಡು, ಫೆ 16(DaijiworldNews/MS): ಉಳಿಯತ್ತಡ್ಕದ ಪೆಟ್ರೋಲ್ ಬಂಕ್ ಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇಜ್ಜತ್ ನಗರದ ಹನೀಫ್ ಪಿ . ಎ ( 24) ಮತ್ತು ಚಟ್ಟಂಗುಯಿಯ ಮುಹಮ್ಮದ್ ರಾಫಿ ( 29) ಬಂಧಿತ ಆರೋಪಿಗಳು. ಶನಿವಾರ ಬೈಕ್ ನಲ್ಲಿ ಬಂದ ಇಬ್ಬರು 50 ರೂ . ಪೆಟ್ರೋಲ್ ಸಾಲ ಕೇಳಿ ನೀಡದಿದ್ದಾಗ ಸಿಬಂದಿಗಳ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ರಾತ್ರಿ ತಂಡವೊಂದು ಬಂಕ್ ಗೆ ನುಗ್ಗಿ ದಾಂಧಲೆ ನಡೆಸಿದ್ದರು.
ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕೃತ್ಯದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿದ್ದು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ