ಮಂಗಳೂರು, ಫೆ 15 (DaijiworldNews/MS): ತುಂಬೆ ರೇಚಕ ಸ್ಥಾವರದಲ್ಲಿ ಪಂಪು ಅಳವಡಿಸುವ ಕಾಮಗಾರಿ ಹಾಗೂ ಕೊಟ್ಟಾರಚೌಕಿ ಬಳಿ ಪೈಪ್ ದುರಸ್ತಿ ತುರ್ತು ಕಾಮಗಾರಿ ಇರುವ ಹಿನ್ನಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಹಲವೆಡೆ ಫೆಬ್ರವರಿ 17 ರಂದು ಬೆಳಿಗ್ಗೆ 6 ರಿಂದ 18 ಫೆಬ್ರವರಿ 6 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಹಾನಗರ ಪಾಲಿಕೆ ಪ್ರಕಟನೆ ತಿಳಿಸಿದೆ.
ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ LLPS 1 -18MGD ರೇಚಕ ಸ್ಥಾವರದಲ್ಲಿ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಪಂಪು ಅಳವಡಿಸುವ ಕಾಮಗಾರಿ ಹಾಗೂ ಕೊಟ್ಟಾರಚೌಕಿ ಬಳಿ ಇರುವ ಸೂಪರ್ ಸ್ಟೀಲ್ ಎದುರು ಇರುವ 900 ಎಂಎಂ ವ್ಯಾಸದ ಪೈಪ್ ದುರಸ್ತಿ ತುರ್ತು ಕಾಮಗಾರಿ ಹಿನ್ನಲೆಯಲ್ಲಿ ಸುರತ್ಕಲ್, ಕಾಟಿಪಳ್ಳ, ಎನ್.ಐ.ಟಿ.ಕೆ, ಎಂ.ಸಿ.ಎಫ್, ಕೂಳೂರು, ಕಾವೂರು ಭಾಗಶ:, ಕೋಡಿಕಲ್ ಭಾಗಶ:, ಪಿ.ವಿ.ಎಸ್, ಲೇಡಿಹಿಲ್, ಬಂದ, ಕಾರ್ಸ್ಟ್ರೀಟ್, ಕುದ್ರೋಳಿ, ಬೋಳೂರು, ಮೇರಿಹಿಲ್, ಪಚ್ಚನಾಡಿ, ದೇರೆಬೈಲ್, ಕೊಡಿಯಾಲ್ಬೈಲ್, ಕದ್ರಿಯಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.