ಮಂಗಳೂರು, ಫೆ 13 (DaijiworldNews/KP): ರಾಷ್ಟ್ರ ಧ್ವಜ ಎಂದರೆ ಅದು ಕೇವಲ ಬಟ್ಟೆಯಲ್ಲ, ಬದಲಾಗಿ ಭಾರತ ನೆಲದ ಆತ್ಮ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದ್ದಾರೆ.
ಭವಿಷ್ಯದಲ್ಲಿ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಾಡಲೂ ಬಹುದು ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರ ಧ್ವಜ ಅಂದರೆ ಅದು ಕೇವಲ ಬಟ್ಟೆಯಲ್ಲ, ಬದಲಾಗಿ ಭಾರತ ನೆಲದ ಆತ್ಮ, ಅಂತಹ ಧ್ವಜದ ಬಗ್ಗೆ ಸಚಿವರ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರ ಧ್ವಜ ಎಲ್ಲರನ್ನು ಎಲ್ಲವನ್ನು ಒಳಗೊಂಡ ಸಮೃಷ್ಠ ಪ್ರಜ್ಞೆ, ಅಂತಹ ಧ್ವಜವನ್ನು ಒಂದು ಧಾರ್ಮಿಕ ಸಂಕೇತಕ್ಕೆ ಹೋಲಿಸಿ ಭವಿಷ್ಯ ನುಡಿಯುವುದು ಸರಿಯೇ? ಎಂದು ಹೇಳಿದ್ದಾರೆ.
ಭಾರತ ನೇಲದಲ್ಲಿ ಸರ್ವ ಜಾತಿ, ಮತವನ್ನು ಒಳಗೊಂಡು ಆಗಿರುವ ರಾಷ್ಟ್ರ ಧ್ವಜವು ಸ್ವಾತಂತ್ರ್ಯದ ಸಮಯದಲ್ಲಿ ಆಗದದಲ್ಲಿ ನೋಡಿದಾಗ ದೇಶದ ಸಾರ್ವಭೌಮತೆ ನೆನೆದು ನಮ್ಮ ಮೈ ಒಮ್ಮೆ ರೋಮಾಂಚನ ಆಗುತ್ತದೆ. ಆದರೆ ಇಂತಹ ವಿಚಾರದಲ್ಲಿ ಸಚಿವರು ಮನಸ್ಸಿಗೆ ಬಂದಂತೆ ರಾಜಕೀಯ ಲಾಭಕ್ಕಾಗಿ ಮಾತನಾಡುವುದು ತಪ್ಪು, ಇದು ಒಬ್ಬ ಪ್ರಜೆಯಾಗಿ ತಾಯಿ ಭಾರತಿಗೆ ಮಾಡುವ ಮೋಸ ಎಂದು ಹೇಳಿದ್ದಾರೆ.