ಉಡುಪಿ, ಫೆ 13 (DaijiworldNews/HR): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯಲ್ಲಿ ಮಹತ್ವದ ಶಾಂತಿ ಸಭೆ ಆರಂಭವಾಗಿದೆ.
ಶಾಂತಿ ಸಭೆಯನ್ನು ಉಡುಪಿ ತಾಶೀಲ್ದಾರ್ ಪ್ರದೀಪ್ ಕುರ್ಡೇಕರ್ ಕರೆದಿದ್ದು, ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಹಿಂದೂ ಜಾಗರಣ ವೇದಿಕೆ, ಜಿಲ್ಲಾ ಮುಸ್ಲಿಮ್ ಒಕ್ಕೂಟ, ಎಸ್ ಡಿ ಪಿಐ, ಸಹಬಾಳ್ವೆ, ಕ್ರೈಸ್ತ ಧರ್ಮಗುರುಗಳು, ಉಡುಪಿ ಕೃಷ್ಣಮಠ, ಕಾಂಗ್ರೆಸ್, ಎಬಿವಿಪಿ, ಜಿಲ್ಲಾ ಪೊಲೀಸ್ ಭಾಗಿಯಾಗಿದ್ದಾರೆ.