ಮಂಗಳೂರು, ಫೆ 13 (DaijiworldNews/KP): ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರಿಕ ಕ್ಷೇತ್ರ ಭಾರೀ ಪ್ರಮಾಣದಲ್ಲಿ ಅಭಾವ ಸೃಷ್ಟಿಯಾಗಿದೆ. ಹೈನುಗಾರಿಕೆಯನ್ನು ಲಾಭದಾಯಕ ವೃತ್ತಿ ಎಂದು ಕರೆಯಲಾಗುತ್ತಿತ್ತು, ಆದರೆ, ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಸುಮಾರು 12 ಸಾವಿರದಷ್ಟು ಕಡಿಮೆಯಾಗಿದೆ.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ಧ ವಾರ್ಷಿಕವಾಗಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಕೈಗೊಂಡಿದ್ದು, ಇಲಾಖೆಯು ತನ್ನ ಗುರಿ ಮತ್ತು ಸಾಧನೆಯ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದಾರೆ, ಇನ್ನು ಕೊರೊನಾ ಎರಡನೆ ಅಲೆಯ ಸಮಯದಲ್ಲಿ ಅನೇಕರು ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳಿಗೆ ತೆರಳಿದ್ದಾರೆ ಎಂಬ ಕಲ್ಪನೆ ಇತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕೃಷಿ ಕ್ಷೇತ್ರದಲ್ಲಿ ಮಾತ್ರ ಪ್ರಗತಿ ಕಾಣುತ್ತಿದೆಯೇ ಹೊರತು ಹೈನುಗಾರಿಕೆಯಲ್ಲಿ ಕಾಣುತ್ತಿಲ್ಲ.
ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 2,52,401 ಜಾನುವಾರುಗಳಿದ್ದು, ಸದ್ಯ 2,40,650ಕ್ಕೆ ಇಳಿದಿದ್ದು, ಜಿಲ್ಲೆಯಲ್ಲಿ 11,751 ಜಾನುವಾರುಗಳ ಕೊರತೆ ಉಂಟಾಗಿದೆ. ಜಾನುವಾರುಗಳ ಕಡಿತದ ಬಗ್ಗೆ ಆಘಾತಕಾರಿ ಅಂಶವು ಬೆಳಕಿಗೆ ಬಂದಿದೆ.
ಇಲಾಖೆಯ ಅಂಕಿಅಂಶಗಳ ಪ್ರಕಾರ, ಬೆಳ್ತಂಗಡಿ ತಾಲೂಕಿನಲ್ಲಿ 4,148 ಜಾನುವಾರುಗಳ ಸಂಖ್ಯೆಯಲ್ಲಿನ ಕಡಿತವು ಅತ್ಯಧಿಕವಾಗಿದೆ. ಹೈನುಗಾರಿಕೆಯಲ್ಲಿ ಉತ್ತಮ ವ್ಯವಹಾರವನ್ನು ದಾಖಲಿಸುತ್ತಿದ್ದ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಕ್ರಮೇಣವಾಗಿ 2,775 ಮತ್ತು 2,275 ಜಾನುವಾರುಗಳ ಕುಸಿತ ದಾಖಲಾಗಿದೆ.