ಮಂಗಳೂರು, ಫೆ 12 (DaijiworldNews/HR): ಕಳೆದ ತಿಂಗಳು ಕುಣಿಗಲ್ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಯನ್ ಡಿ'ಕೋಸ್ತಾ ಫೆ.12ರ ಶನಿವಾರ ನಿಧನರಾಗಿದ್ದಾರೆ.
ಅಪಘಾತದಲ್ಲಿ ಕುಲಶೇಖರ್ನ ಟೆರೆನ್ಸ್ ಫೆರ್ನಾಂಡಿಸ್ ಜೋಯಲ್ ಟೆರೆನ್ಸ್ ಫೆರ್ನಾಂಡಿಸ್ (28) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರಾಯನ್ ಡಿಕೋಸ್ಟಾ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ಮೂವರಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ದೈಜಿವರ್ಲ್ಡ್ ವಾಹಿನಿಯು ಈ ಹಿಂದೆ ರಾಯನ್ ಚಿಕಿತ್ಸೆಗೆ ಸಹಾಯವನ್ನು ಕೋರುವ ಮನವಿಯನ್ನು ಪ್ರಕಟಿಸಿದ್ದು, ಚಿಕಿತ್ಸೆ ನೀಡಲು ಅವರ ಕುಟುಂಬಸ್ಥರು ಆರ್ಥಿಕ ನೆರವು ಕೋರಿದ್ದರು.