ಕಡಬ, ಫೆ 12 (DaijiworldNews/KP): ವಿಧವೆ ಮಹಿಳೆಯೊಬ್ಬಳ ಮನೆಯಲ್ಲಿ ಅನ್ಯ ಧರ್ಮಕ್ಕೆ ಸೇರಿದ್ದ ಯುವಕನೊಬ್ಬ ವಾಸವಿರುವ ಮಾಹಿತಿಯನ್ನು ಪಡೆದ ಹಿಂದೂ ಕಾರ್ಯಕರ್ತರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದು ಆತನನ್ನು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕೊಟ್ಟಾರಿಯಲ್ಲಿ ವಾಸವಾಗಿರುವ ವಿಧವೆ ಹಿಂದೂ ಮಹಿಳೆಗೆ ಅನ್ಯಕೋಮಿನ ವ್ಯಕ್ತಿಯೊಬ್ಬ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನಿಸಿ, ಆಕೆಯ ಮನೆಯಲ್ಲಿ ಹಲವು ಬಾರಿ ತಂಗಿದ್ದ ಎಂದು ಆರೋಪಿಸಲಾಗಿದ್ದು, ಈ ಕುರಿತು ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರು ಆಕೆಯ ಮನೆಗೆ ಹೋಗಿ ಮನವರಿಗೆ ಮಾಡಲು ಪ್ರಯತ್ನಿಸಿದ್ದಾರು, ಆದರೂ ಕೂಡ ಆ ವ್ಯಕ್ಥಿ ಆಕೆಯ ಮನೆಗೆ ಹೋಗುತ್ತಿದ್ದನು, ಅಲ್ಲದೆ ಅನ್ಯ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳು ಆಕೆಯ ಮನೆಯಲ್ಲಿ ಸಿಕ್ಕಿದೆ. ಅಲ್ಲದೆ ಆ ವ್ಯಕ್ತಿ ಮತ್ತೆ ಗುರುವಾರ ಆಕೆಯ ಮನೆಯಲ್ಲಿ ಉಳಿದುಕೊಂಡಿರುವ ವಿಷಯ ತಿಳಿದ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವರ್ಷಗಳ ಹಿಂದೆ ಮಹಿಳೆಯ ಮೇಲೆ ಕೋಡಿಂಬಾಳದಲ್ಲಿ ಆಕೆಯ ಸ್ವಂತ ಸೋದರ ಮಾವ ಆಸಿಡ್ ದಾಳಿ ನಡೆಸಿದ್ದರು, ಬಳಿಕ ಆಸ್ಪತ್ರೆಯಿಂದ ಚೇತರಿಸಿಕೊಂಡು ಆದೆ ಹಳ್ಳಿಯಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದಳು, ಅಲ್ಲದೆ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ ಪತಿಯ ಅಣ್ಣನನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ಈ ವಿಚಾರದ ಕುರಿತು ಮಹಿಳೆ ಜಾಮೀನು ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ಅದನ್ನು ನ್ಯಾಯಾಲಯ ಎತ್ತಿ ಹಿಡಿದಿದ್ದು, ಆರೋಪಿಗೆ ಮತ್ತೆ ಜೈಲು ಶಿಕ್ಷೆಯಾಗಿದೆ.
ಈ ಎಲ್ಲಾ ವಿಷಯಗಳಿಂದ ಖಿನ್ನತೆಗೆ ಒಳಗಾಗಿದ್ದ ವಿಧವೆಯ ಅಸಹಾಯಕತೆಯಿಂದ ತನ್ನ ಲಾಭ ಪಡೆದು ಆಕೆಯನ್ನು ಮತಾಂತರಗೊಳಿಸುವ ಪ್ರಯತ್ನ ನಡೆಯುತ್ತಿದನ್ನು ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಕಡಬ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.