ಉಡುಪಿ, ಫೆ 11(DaijiworldNews/MS): ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಹುಟ್ಟಿಕೊಂಡ ಹಿಜಾಬ್ ವಿವಾದದ ಬಗ್ಗೆ ಎನ್ಐಎ ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಶುಕ್ರವಾರ, ಫೆಬ್ರವರಿ 11 ರಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಶಾಸಕ ಭಟ್, “ಹೈಕೋರ್ಟ್ ಆದೇಶ ನೀಡಿದ ನಂತರವೂ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಅವರು ಬಳಸಿಕೊಂಡಿದ್ದಾರೆ. ಇದನ್ನು ವಿದ್ಯಾರ್ಥಿಗಳೇ ಮಾಡುತ್ತಿಲ್ಲ. ಅವರನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಬೆಂಬಲಿಸುತ್ತದೆ. ಇವರ ಜೊತೆ ಕಾಂಗ್ರೆಸ್ ಕೂಡಾ ಸೇರಿಕೊಂಡಿದೆ.ಯೂತ್ ಕಾಂಗ್ರೆಸ್ ಅದ್ಯಕ್ಷ ಸುಪ್ರಿಂ ಕೊರ್ಟ್ ಗೆ ಹೋಗಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಜೊತೆಗೆ ಕಾಂಗ್ರೆಸ್ ಕೂಡಾ ಸೇರಿಕೊಂಡಿದೆ. ಓವೈಸಿ ಪಾರ್ಟಿಯವರು ಇಲ್ಲಿಗೆ ಬಂದಿದ್ದಾರೆ. ಹೈದರಾಬಾದ್ ನಿಂದ ಇಲ್ಲಿಗೆ ಬಂದು ಮಾಡಲು ಏನಿದೆ?ಹೊರರಾಜ್ಯಗಳಿಂದ ಟ್ರೈನರ್ಸ್ ಬಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ ಈ ಸಾಕ್ಷ್ಯಗಳನ್ನು ಇಲಾಖೆಗೆ ನೀಡಿದ್ದೇವೆ ಎಂದು ಆರೋಪಿಸಿದ್ದಾರೆ.
"ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆರು ವಿದ್ಯಾರ್ಥಿಗಳು ಟ್ವಿಟರ್ವನ್ನು ಎದುರಿಸುತ್ತಿದೆ. ಎನ್ಐಎ ಮೂಲಕ ಸಮಗ್ರ ತನಿಖೆ ನಡೆಸಬೇಕು. ಬಡ ವಿದ್ಯಾರ್ಥಿಗಳು ಸುಪ್ರಿಂಕೋರ್ಟ್ ಯನ್ನು ಸಂಪರ್ಕಿಸಿದ್ದಾರೆ" ಎಂದು ಹೇಳಿದ್ದಾರೆ.
ಈ ವಿವಾದ ಮೂಲಕ ಶಾಂತಿ ಕದಡುವ ಅಪಾಯವಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಕೂಡ ಸ್ಪಷ್ಟವಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಸಿ. ಕಾಂಗ್ರೆಸ್ ಸಿಎಫ್ಐ ಜೊತೆ ಕೈ ಜೋಡಿಸಿದೆ.ಒವೈಸಿಯವರ ರಾಜಕೀಯ ಪಕ್ಷದ ಜನ ಉಡುಪಿಗೆ ಬಂದಿದ್ದಾರೆ. ಕೆಲವರು ಹೈದರಾಬಾದ್ನಿಂದ ಬಂದು ಉಡುಪಿ ಸುತ್ತಿದ್ದಾರೆ. ಉಡುಪಿಯ ಮುಸ್ಲಿಂ ಮುಖಂಡರು ನಮ್ಮೊಂದಿಗೆ ಉತ್ತಮ ಸಂಪರ್ಕದಲ್ಲಿದ್ದಾರೆ. ಮುಸ್ಲಿಂ ಮುಖಂಡರ ಜೊತೆ ಹಲವಾರು ಸಭೆಗಳು ಆಗಿದೆ. ನಿಜವಾದ ವಿದ್ಯಾವಂತ ಮುಸ್ಲಿಂರಿಗೆ ಸಂಘರ್ಷ ಬೇಡವಾಗಿದೆ. ಹಿಂದೂ-ಮುಸಲ್ಮಾನರು ಒಗ್ಗಟ್ಟಾಗಿ ದೇಶ ಮುನ್ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಇಡೀ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ ಎಂಬುದು ಗೊತ್ತಾಗಿದೆ. ಹೈದರಾಬಾದ್, ಬೆಂಗಳೂರು ಮತ್ತು ಕೇರಳದ ಜನರು ಈ ಶಾಂತಿಯುತ ಜಿಲ್ಲೆಯನ್ನು ಕದಡಲು ಬಯಸುತ್ತಾರೆ. ಕೂಲಂಕಷವಾದ ಸಮಗ್ರ ತನಿಖೆ ನಡೆಯಬೇಕು' ಎಂದು ಒತ್ತಾಯಿಸಿದ್ದಾರೆ.