ಕಾರ್ಕಳ, ಫೆ 11 (DaijiworldNews/KP): ದನದ ಚರ್ಮವನ್ನು ಕಿಡಿಗೇಡಿಗಳು ತೆಳ್ಳಾರು ಸೇತುವೆಯ ಕೆಳಗೆ ನದಿಗೆ ಎಸೆದ ಘಟನೆ ಫೆ.10 ರ ಗುರುವಾರ ರಾತ್ರಿ ನಡೆದಿದೆ.
ಯಾರೋ ಕಿಡಿಗೇಡಿಗಳು ದನದ ಚರ್ಮವನ್ನು ನದಿಗೆ ಗುರುವಾರ ರಾತ್ರಿ ಎಸೆದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.
ಈ ಘಟನೆಯಿಂದ ಹಿಂದೆ ಅನ್ಯ ಕೋಮಿನವರ ಜೊತೆ ಸ್ಥಳೀಯರು ಕೈಜೋಡಿಸಿದ್ದಾರೆ ಎಂದು ಶಂಕಿಸಲಾಗಿದೆ.
ಕರಾವಳಿಯಲ್ಲಿ ಇಂತಹ ಘಟನೆಗಳು ಆಗಾಗ ಬೆಳಕಿಗೆ ಬರುತಿದ್ದು, ಇದರಿಂದ ಹಿಂದು ಧರ್ಮದ ನಂಬಿಕೆ ಹಾಗೂ ಭಾವನೆಗೆ ಧಕ್ಕೆಯುಂಟಾಗುತ್ತಿದೆ, ಅಲ್ಲದೆ ಜಿಲ್ಲೆಗಳಲ್ಲಿ ಶಾಂತಿ ಕೇಡಿಸಲು ಪ್ರಯತ್ನ ಮಾಡುವವರ ವಿರುದ್ದ ಶೀಘ್ರವೇ ಕ್ರಮ ತೆಗೆದುಕೊಂಡು ಇಂತಹ ಹೀನ ಕೃತ್ಯಗಳಿಗೆ ಕಡಿವಾಣ ಬೀಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ
ಹಿಂದು ಧರ್ಮದ ನಂಬಿಕೆಗಳಿಗೆ ಧಕ್ಕೆ ತಂದು ಅಶಾಂತಿ ಸೃಷ್ಟಿಸುತ್ತಿರುವವರ ವಿರುದ್ದ ಪೊಲೀಸ್ ಇಲಾಖೆಯು ಕಠಿಣ ಕ್ರಮ ಕೈಗೊಳ್ಳವಂತೆ ಕಾರ್ಕಳ ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ.