ಕಾರ್ಕಳ, ಫೆ 11 (DaijiworldNews/HR): ಉಡುಪಿ ಕೇಂದ್ರೀಕೃತವಾಗಿ ರಾಜ್ಯ ವ್ಯಾಪ್ತಿಯಲ್ಲಿ ಅಶಾಂತಿ ಮೂಡಿಸಲು ಕಾರಣವಾಗಿರುವ ಹಿಜಾಬ್-ಕೇಸರು ಶಾಲು ವಿವಾದ ತೀರ್ಪು ಹೊರೆಬೀಳಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ.
ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ವ್ಯಾಪ್ತಿಯ ಹೆಬ್ರಿ, ಅಜೆಕಾರು, ಕಾರ್ಕಳ ಗ್ರಾಮಾಂತರ, ಕಾರ್ಕಳ ನಗರ ಸೇರಿದಂತೆ ಉಡುಪಿ ಜಿಲ್ಲಾ ಶಸ್ತ್ರಸ್ತ ಪಡೆಯ ಸುಮಾರು100 ಮಂದಿ ಪೊಲೀಸರ ತಂಡ ಕಾರ್ಕಳದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ ನಾಗರಿಕರಲ್ಲಿ ಧೈರ್ಯ ತುಂಬಿದರು.
ಅನಂತಶಯನ ವೃತ್ತದಿಂದ ಹೊರಟ ಪಥಸಂಚಲನಕ್ಕೆ ಡಿಸೈಎಸ್ಪಿ ವಿನಯಪ್ರಸಾದ್ ಚಾಲನೆ ನೀಡಿದರು. ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ಕುಮಾರ್ ಫಥ ಸಂಚಲನ ನೇತೃತ್ವ ವಹಿಸಿದರು.
ಅನಂತಶಯನ, ಮೂರು ಮಾರ್ಗ, ಸಾಲ್ಮರ್,ಬಂಡೀಮಠ ಮೂಲಕವಾಗಿ ಸುಮಾರು ಐದು ಕಿ.ಮೀ ವರೆಗೆ ಪಥಸಂಚಲನ ನಡೆಸಿ ಜೋಡುರಸ್ತೆಯಲ್ಲಿ ಸಂಪನ್ನಗೊಳಿಸಲಾಯಿತು.
ಹೆಬ್ರಿ ಠಾಣಾಧಿಕಾರಿ ಮಹೇಶ್, ಅಜೆಕಾರು ಠಾಣಾಧಿಕಾರಿ ಸುದರ್ಶನ, ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ನಗರ ಠಾಣಾಧಿಕಾರಿ ಪ್ರಸನ್ನ ಇವರು ಪಾಲ್ಗೊಂಡರು.