ಮಂಗಳೂರು, ಫೆ 11 (DaijiworldNews/HR): ಪಡೀಲ್ನ ಜಿಲ್ಲಾಧಿಕಾರಿ ಕಚೇರಿಯ ನೂತನ ಕಟ್ಟಡ ಕಾಮಗಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಪರಿಶೀಲಿಸಿದರು.
ಈ ಕಟ್ಟಡವು 2.26 ಲಕ್ಷ ಚದರ ಅಡಿ ಜಾಗವನ್ನು ಒಳಗೊಂಡಿದ್ದು, ನೆಲ ಮಹಡಿ ಮತ್ತು ಮೂರು ಅಂತಸ್ತಿನ ಸಂಕೀರ್ಣವು 5.8 ಎಕರೆ ಭೂಮಿಯಲ್ಲಿ ಬರಲಿದೆ. ಇದರಲ್ಲಿ ಶಾಸಕರು ಮತ್ತು ಸಂಸದರ ಕಚೇರಿಗಳಲ್ಲದೆ 38 ಇಲಾಖೆಗಳನ್ನು ಒಳಗೊಂಡಿದ್ದು, ಕಟ್ಟಡದ ಮೂಲ ಅಂದಾಜು 41 ಕೋಟಿ ರೂ. ಆಗಿದ್ದು, ಪರಿಷ್ಕೃತ ಅಂದಾಜು 55 ಕೋಟಿಗೂ ಹೆಚ್ಚು ಆಗಲಿದೆ.
ಸಚಿವರ ಭೇಟಿ ವೇಳೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.