ಕಾಸರಗೋಡು, ಫೆ. 10 (DaijiworldNews/SM): ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಕೆ. ಎನ್. ಕೃಷ್ಣ ಭಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚಿಗೆ ನಿಧನನಾದ ಕೊಡುಗೈ ದಾನಿ ಸಾಯಿರಾಂ ಗೋಪಾಲ ಕೃಷ್ಣ ಭಟ್ ರವರ ಪುತ್ರರಾಗಿರುವ ಕೃಷ್ಣ ಭಟ್ ರವರು ಸಮಾಜ ಸೇವೆಯಲ್ಲಿ ಸಕ್ರಿಯರಾಗುವ ಉದ್ದೇಶದಿಂದ ರಾಜೀನಾಮೆ ಸಲ್ಲಿಸಿದ್ದಾರೆ ರಾಜೀನಾಮೆ ಪತ್ರವನ್ನು ಪಂಚಾಯತ್ ಕಾರ್ಯದರ್ಶಿರವರಿಗೆ ನೀಡಿದ್ದಾರೆ.
ತಂದೆಯ ನಿಧನದಿಂದ ಅವರು ನೀಡಿದ ಸಮಾಜಸೇವೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ರಾಜಕೀಯದಿಂದ ದೂರ ಉಳಿಯುವುದಾಗಿ ಕೃಷ್ಣ ಭಟ್ ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯರಾಗಿದ್ದ ಕೃಷ್ಣ ಭಟ್ 2020 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬದಿಯಡ್ಕ ಪಂಚಾಯತ್ ನ 14 ನೇ ವಾರ್ಡ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.