ಉಡುಪಿ, ಫೆ 10 (DaijiworldNews/HR): ಹಿಜಾಬ್ ವರ್ಸಸ್ ಕೇಸರಿ ವಿವಾದಕ್ಕೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಈ ಆದೇಶ ನಮಗೆ ತೃಪ್ತಿ ನೀಡಿಲ್ಲ ಇದನ್ನು ನಾವು ನಿರೀಕ್ಷಿಸಿಲ್ಲ ಏನ್ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೋರ್ಟ್ ನ ಆದೇಶವನ್ನು ನಾವು ಗೌರವಿಸುತ್ತೇವೆ ಸೋಮವಾರದ ನಂತರ ವಿಚಾರಣೆ ಸಂದರ್ಭ ನಮ್ಮ ಪರವಾಗಿ ತೀರ್ಪುಗಳು ಬರಬಹುದು ಎಂಬ ನಂಬಿಕೆ ಇದೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಇದನ್ನು ಹೊರತಾಗಿ ಶನಿವಾರ ಅಥವಾ ಸೋಮವಾರದಿಂದ ಕಾಲೇಜಿಗೆ ತೆರಳುವುದು ವಿದ್ಯಾರ್ಥಿನಿಯರ ಈಚೆಗೆ ಬಿಡುತ್ತೇವೆ ನಾವು ಯಾವುದೇ ಒತ್ತಡವನ್ನು ಹಾಕಲು ಸಲಹೆಗಳನ್ನು ನೀಡಲು ಮುಂದಾಗುವುದಿಲ್ಲ ಪೋಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯದಂತೆ ಅವರು ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಬಹುದು ನಾವು ಯಾರಿಗೂ ಯಾವುದೇ ಸೂಚನೆಗಳನ್ನು ಕೊಡಲು ಹೋಗುವುದಿಲ್ಲ ಎಂದರು.
ಇನ್ನು ನಾವು ಕಾನೂನು ರೀತಿಯ ಹೋರಾಟ ಮತ್ತು ಸಲಹೆಗಳನ್ನು ಕೊಟ್ಟಿರುವುದು ಉಡುಪಿ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ. ಉಡುಪಿ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಜೊತೆ ನಾವು ಹಿಂದೆಯೂ ನಿಂತಿದ್ದೇವೆ ಮುಂದೆಯೂ ಇರುತ್ತೇವೆ ಎಂದು ಹೇಳಿದ್ದಾರೆ.