ಉಡುಪಿ, ಫೆ 10 (DaijiworldNews/HR): ಯೋಧನ ಪತ್ನಿಗೆ ಸೋದರ ಮಾವ ಕತ್ತಿಯಿಂದ ಕಡಿದಿರುವ ಘಟನೆ ಮಣಿಪಾಲದ ಪರ್ಕಳ ಹೆರ್ಗ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಪರ್ಕಳ ಹೆರ್ಗ ಗ್ರಾಮದ ಯೋಧ ಯಮನೂರಿ ಎಂಬಾತನ ಪತ್ನಿ ದೀಪಾ ನಾಯಕ್ ಎಂದು ಗುರುತಿಸಲಾಗಿದೆ.
ಹಲ್ಲೆ ಮಾಡಿದ ಆರೋಪಿಯನ್ನು ಸೋದರ ಮಾವ ಜಗದೀಶ್ ನಾಯಕ್ ಎನ್ನಲಾಗಿದ್ದು, ತನ್ನ ಪಕ್ಕದ ಮನೆಯ ಬಳಿ ಸರ್ವೆಯನ್ನ ನೋಡುತ್ತಿದ್ದಾಗ ಏಕಾಏಕಿ ಹಿಂಬದಿಯಿಂದ ಬಂದು ಕತ್ತಿಯಿಂದ ತಲೆಗೆ ಹೊಡೆದು ಓಡಿ ಹೋಗಿದ್ದಾರೆ ಎಂದು ದೀಪಾ ಆರೋಪ ಮಾಡಿದ್ದಾರೆ.
ದೀಪಾ ಅವರನ್ನು ಉಡುಪಿಯ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದೆ.,
ಇನ್ನು ಆಸ್ತಿ ವಿಚಾರದ ಪೂರ್ವ ದ್ವೇಷದಿಂದ ಈ ರೀತಿ ಕೊಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.