ಉಡುಪಿ, ಫೆ. 09 (DaijiworldNews/SM): ಕಾಲೇಜಿನಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದ ವಿವಾದ ಹಾಗೂ ಬಳಿಕದ ಘಟನೆಗಳಿಗೆ ಸಂಬಂಧಿಸಿದ ಉಡುಪಿಯಲ್ಲಿ ದಾಯ್ಜಿವರ್ಲ್ಡ್ ಜೊತೆ ಶಾಸಕ ರಘುಪತಿ ಭಟ್ ಎಕ್ಸ್ ಕ್ಲೂಸಿವ್ ಮಾತುಕತೆ ನಡೆಸಿದ್ದು, ಕಲಿಯುವ ಹೆಣ್ಣುಮಕ್ಕಳು ಇಂತಹ ರಾದ್ದಾಂತ ಮಾಡಿವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ದೈಜಿವರ್ಲ್ಡ್ ಜೊತೆ ಮಾತನಾಡಿದ ಅವರು ಒಟ್ಟು 12 ಮಂದಿ ವಿದ್ಯಾರ್ಥಿನಿಯರು ಮೊದಲಿಗೆ ಹಿಜಾಬ್ ಬೇಕು ಎಂದಿದ್ದರು. ಅವರಲ್ಲಿ 6ಮಂದಿ ವಾಪಾಸ್ ಬಂದಿದ್ದಾರೆ. ಈ 12 ಮಂದಿಗೆ ಒಂದು ಗುಪ್ತ ಸ್ಥಳದಲ್ಲಿ ಟ್ರೇನಿಂಗ್ ಆಗಿದೆ. ದೊಡ್ಡ ಷಡ್ಯಂತ್ರ ಇದರಲ್ಲಿಇದೆ, ಆ ಮಕ್ಕಳು ಅಶಿಸ್ತಿನ ಮಕ್ಕಳು. ಅವರಿಗೆ ಸರಿಯಾಗಿ ಅಟೆಂಡೆನ್ಸ್ ಇಲ್ಲ ಎಂದು ಶಾಸಕ ಭಟ್ ದೈಜಿವರ್ಲ್ಡ್ ನಲ್ಲಿ ನಡೆದ ಸಂದರ್ಶನ ಸಂದರ್ಭ ಅಸಮಾಧಾನ ಹೊರಹಾಕಿದ್ದಾರೆ.
ನಾನು ಮುಸ್ಲಿಂ ಮುಖಂಡರನ್ನೂ ದೂರೂವುದಿಲ್ಲ. ಪ್ರಾರಂಭಿಕ ಹಂತದಲ್ಲಿ ಕಾಂಗ್ರೆಸ್ ಮುಖಂಡರನ್ನೂ ದೂರುವುದಿಲ್ಲ. ಎಸ್ ಡಿ ಪಿ ಐ ಮತ್ತು ಕ್ಯಾಂಪಸ್ ಫ್ರಂಟ್ ಇದರಲ್ಲಿದೆ. ಮುಸ್ಲಿಂ ವೋಟ್ ಬ್ಯಾಂಕ್ ಬೇಕು ಎಂಬ ಕಾರಣಕ್ಕಾಗಿ ಅವರು ದುಮುಕಿದ್ದಾರೆ. ಇದರಿಂದಾಗಿ ಉಡುಪಿಯ ಸೌರ್ಹಾದತೆಗೆ ಧಕ್ಕೆ ಆಯಿತು ಎಂದು ದಾಯ್ಜಿವರ್ಲ್ಡ್ ಜೊತೆ ಎಕ್ಸ್ ಕ್ಲೂಸಿವ್ ಮಾತುಕತೆಯಲ್ಲಿ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.