ಪುತ್ತೂರು, ಫೆ 09 (DaijiworldNews/MS): ಮರ ಕಡಿಯುತ್ತಿದ್ದ ಸಂದರ್ಭ ಕೊಂಬೆ ಮುರಿದ ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಪುರುಷರ ಕಟ್ಟೆ ಎಂಬಲ್ಲಿ ಫೆ ೦೯ ರ ಬುಧವಾರ ಮಧ್ಯಾಹ್ನ ನಡೆದಿದೆ.
ತಿಂಗಳಾಡಿ ಸಮೀಪದ ಕೂಡುರಸ್ತೆ ನಿವಾಸಿ ದಿ.ಹಸೈನಾರ್ ಎಂಬವರ ಪುತ್ರ ಬಾತಿಷ್ ಸುಲ್ತಾನ್(32) ಮೃತ ಪಟ್ಟ ದುರ್ದೈವಿ
ಕೂಲಿ ಕಾರ್ಮಿಕರಾಗಿದ್ದ ಇವರು ಪುರುಷರ ಕಟ್ಟೆಯಲ್ಲಿ ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಮರದ ಕೊಂಬೆ ಬಾತಿಷ್ ಸುಲ್ತಾನ್ ಮೈಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ತಾಯಿ, ಪತ್ನಿ, ಮೂರು ವರ್ಷದ ಪುಟ್ಟ ಮಗನನ್ನು ಅಗಲಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ