ಮಂಗಳೂರು, ಫೆ 09 (DaijiworldNews/KP): ಕಲ್ಲಿದ್ದಲು ಸಾಗಾಟದ ಲಾರಿಯೊಂದು ಪಲ್ಟಿಯಾದ ಘಟನೆ ನಗರದ ಹೊರವಲಯದ ಪಡೀಲ್ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.
ರಸ್ತೆ ಅಫಘಾತದಲ್ಲಿ ಚಾಲಕನ ಕಾಲು ವಾಹನಕ್ಕೆ ಸಿಲುಕಿಕೊಂಡಿದ್ದು, ಸದ್ಯ ಅವರನ್ನು ಸುರಕ್ಷಿತವಾಗಿ ವಾಹನದಿಂದ ಹೊರತೆಗೆಯಲು ಪ್ರಯತ್ನ ನಡೆಸುತ್ತಿದ್ದಾರೆ.
ಘಟನೆಯಲ್ಲಿ ಲಾರಿಯಲ್ಲಿದ್ದ ಕಲ್ಲಿದ್ದಲು ರಸ್ತೆಗೆ ಚೆಲ್ಲಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಇನ್ನು ರಸ್ತೆಯಿಂದ ಲಾರಿಯನ್ನು ಮೇಲೆತ್ತಲು ಯಂತ್ರವನ್ನು ಬಳಸಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.