ಕಾಸರಗೋಡು, ಫೆ 08 (DaijiworldNews/HR): ಕೇರಳದಲ್ಲಿ ಜಾರಿಯಲ್ಲಿದ್ದ ಭಾನುವಾರದ ಲಾಕ್ಡೌನ್ ಹಿಂತೆಗೆದು ಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮಂಗಳವಾರ ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಕೊರೊನಾ ಅವಲೋಕ ನಾ ಸಭೆಯಲ್ಲಿ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ.
ಫೆ ವರಿ 28 ರಿಂದ ಶಾಲೆಗಳು ಸಂಜೆ ತನಕ ಕಾರ್ಯಚರಿಸಲಿದ್ದು, ಶೇಕಡಾ 50 ರಷ್ಟು ವಿದ್ಯಾರ್ಥಿ ಗಳಿಗೆ ಒಂದು ಬ್ಯಾಚ್ ನಂತೆ ತರಗತಿ ನಡೆಯಲಿದೆ.
ಆಯಾ ಜಿಲ್ಲೆಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ ಗಮನಿಸಿ ನಿರ್ಬಂಧ ಗಳನ್ನು ಜಾರಿಗೆ ತರಲು ತೀರ್ಮನಿಸಲಾಗಿದೆ.