ಉಡುಪಿ, ಫೆ. 08 (DaijiworldNews/SM): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ. ಹೈಕೋರ್ಟ್ ಆದೇಶದವರೆಗೆ ಸರಕಾರಿ ಆದೇಶ ಪಾಲಿಸಿ ಎಂದು ಉಡುಪಿ ಶಾಸಕ ರಘುಪತಿ ಭಟ್ ಮನವಿ ಮಾಡಿಕೊಂಡಿದ್ದಾರೆ.
ಹಿಜಾಬ್, ಕೇಸರಿ ಧರಿಸುವವರು ಸಮವಸ್ತ್ರ ಪಾಲಿಸಬೇಕು. ನಾಳೆ ಅಥವಾ ನಾಡಿದ್ದು ಹೈಕೋರ್ಟ್ ಆದೇಶ ಬರಬಹುದು. ಒಂದೊಮ್ಮೆ ಹಿಜಾಬ್ ಧರಿಸಲು ಕೋರ್ಟ್ ಆದೇಶ ನೀಡಿದ್ದಲ್ಲಿ ತಕ್ಷಣದಿಂದಲೇ ಅವಕಾಶ ನೀಡಲಾಗುವುದು. ಚುನಾವಣೆಗೂ ಹಿಜಾಬ್ಗೂ ಯಾವುದೇ ಸಂಬಂಧ ಇಲ್ಲ. ಹಿಜಾಬ್ ವಿವಾದವನ್ನು ಬೇಕು ಅಂತಲೇ ಮಾಡಿದ್ದಾರೆ. ಮುಸ್ಲಿಂ ಮತಕ್ಕಾಗಿ ಈಗ ಸ್ಪರ್ಧೆಗಳು ಏರ್ಪಟ್ಟಿದೆ. ಎಸ್ಡಿಪಿಐ, ಕ್ಯಾಂಪಸ್ ಫ್ರಂಟ್ ಸಪೋರ್ಟ್ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ನವರಿಗೆ ಸರಿ ಎಂದು ಅನ್ನಿಸಿತ್ತು. ಯಾವಾಗ ಎಸ್ಡಿಪಿಐ ಮುಸ್ಲಿಂ ಓಟ್ ಹೊಡೆಯಲು ಆರಂಭಿಸಿತೋ, ಕಾಂಗ್ರೆಸ್ಸಿಗರು ಕೂಡಾ ನಾವು ಬರುತ್ತೇವೆ ಎಂದು ಮುಂದೆ ಬಂದಿದ್ದಾರೆ. ಮುಸ್ಲಿಂ ಮತಕ್ಕಾಗಿ ಕಾಂಗ್ರೆಸ್ನವರು ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಈ ವಿವಾದ ಮುಚ್ಚಿ ಹಾಕುವುದೇ ಉದ್ಧೇಶವಾಗಿದೆ. ಎಸ್ಡಿಪಿಐ, ಕಾಂಗ್ರೆಸ್ ಮುಸ್ಲಿಂ ಮತಕ್ಕಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಆ ಸ್ಪರ್ಧೆಯಿಂದ ಇಂದು ಈ ವಿವಾದ ಹುಟ್ಟಿಕೊಂಡಿದೆ ಎಂದು ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.