ಮಂಗಳೂರು, ಫೆ 08 (DaijiworldNews/KP): ಸೋಮೇಶ್ವರ ಕಡಲ ತೀರದ ಬಳಿ ಇಂದು ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತರನ್ನು ತೊಕ್ಕೊಟ್ಟುವಿನ ಚಾವಡಿ ಗ್ರಾಮದ ಕೊಳಿಯ ನಿವಾಸಿ ಎಂಜಿನಿಯರ್ ಉದ್ಯಮಿ ಸುರೇಶ್(43) ಎಂದು ಗುರುತಿಸಲಾಗಿದೆ.
ಇವರ ಫೋನ್ 12 ಗಂಟೆಯಿಂದ ಸ್ವಿಚ್ ಆಫ್ ಆಗಿರುವ ಹಿನ್ನಲೆ ಮನೆಯವರು ಹುಡುಕಾಟ ನಡೆಸಿದಾಗ ಸೋಮೇಶ್ವರ ಸಮುದ್ರ ತೀರದಲ್ಲಿ ಸುರೇಶ್ ಅವರ ಚಪ್ಪಲಿ ಪತ್ತೆಯಾಗಿದ್ದು, ನಂತರ ಮೃತ ದೇಹವನ್ನು ಸಮುದ್ರದಲ್ಲಿ ಹುಡುಕಾಟ ನಡೆಸಿ ದೇಹವನ್ನು ಹೊರತೆಗೆಯಲಾಯಿತು.